Sunday, 21 August 2011
ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ?
ಶಿಸ್ತು ಮತ್ತು ಶಿಕ್ಷೆ ಈ ಎರಡೂ ಶಬ್ದಗಳು ಶಿಕ್ಷಣ ಶಬ್ದದಿಂದ ನಿರ್ಮಾಣವಾಗಿವೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಜಾರಿಯಲ್ಲಿ ತರುವುದೇ ಶಿಸ್ತು. ಇದಕ್ಕಾಗಿ ಶಿಕ್ಷೆ ಯಾತಕ್ಕಾಗಿ, ಯಾವ ತಪ್ಪಿಗಾಗಿ ಹಾಗೂ ಯಾವ ತಪ್ಪು ವರ್ತನೆಗಾಗಿ ಇದೆ, ಎನ್ನುವುದನ್ನು ತಿಳಿಸಿಯೇ ಶಿಕ್ಷೆಯನ್ನು ನೀಡಬೇಕು.
ಶಿಸ್ತನ್ನು ಕಲಿಸುವ ಸಂದರ್ಭದಲ್ಲಿ ಮಹತ್ವದ ಸೂಚನೆಗಳು
೧. ಒಳ್ಳೆಯ ವರ್ತನೆಯ ಸ್ತುತಿ ಮತ್ತು ತಪ್ಪುವರ್ತನೆಗೆ ಶಿಕ್ಷೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ಅಥವಾ ಬಹುಮಾನ ಸಿಕ್ಕಿದರೆ ಅದರ ಸ್ತುತಿಯನ್ನು ಮಾಡಬೇಕು. ಅವರ ಪ್ರಶಂಸೆಯನ್ನು ಮಾಡಬೇಕು ಎಂದರೆ ಅವರಿಗೆ ಇನ್ನೂ ಒಳ್ಳೆಯದಾಗಿ ವರ್ತಿಸುವುದಕ್ಕೆ ಪ್ರೋತ್ಸಾಹನೆಯು ಸಿಗುವುದು. ಅವರ ತಪ್ಪುನಡವಳಿಕೆಗೆ ಕೋಪವನ್ನು ವ್ಯಕ್ತ ಮಾಡಬೇಕು ಮತ್ತು ಅವಶ್ಯವೆನಿಸಿದಲ್ಲಿ ಶಿಕ್ಷೆಯನ್ನೂ ನೀಡಬೇಕು.
೨. ಆಜ್ಞೆಯನ್ನು ಮಾಡದೇ ವಿನಂತಿಯನ್ನು ಮಾಡಬೇಕು. "ನೀರನ್ನು ತಾ", ಎಂದು ಹೇಳದೇ "ರಾಜಾ ನನಗೊಂದು ಗ್ಲಾಸು ನೀರನ್ನು ತಂದುಕೊಡಬಹುದಾ ?", ಎಂದು ವಿನಂತಿಯನ್ನು ಮಾಡಬೇಕು.
೩. ಮನೆಯಲ್ಲಿನ ಸದಸ್ಯರ ಒಮ್ಮತ-ಮಗುವಿಗೆ ಶಿಸ್ತನ್ನು ಹಚ್ಚುವ ಮೊದಲು ಮಗುವಿನಿಂದ ಯಾವ ರೀತಿಯ ನಡವಳಿಕೆಯ ಅಪೇಕ್ಷೆಯಿದೆಯೆನ್ನುವುದರ ವಿಚಾರವನ್ನು ಮಾಡಿ ನಮ್ಮ ಭೂಮಿಕೆಯನ್ನು ನಿಶ್ಚಿತಗೊಳಿಸಬೇಕು ಮತ್ತು ಎರಡು ಮತಗಳಾಗಲು ಬಿಡಬಾರದು. ತಾಯಿ-ತಂದೆಯ ಹಾಗೂ ಮನೆಯಲ್ಲಿನ ಇತರ ಸದಸ್ಯರ ಒಮ್ಮತವು ಮಗುವಿಗೆ ಶಿಸ್ತನ್ನು ಕಲಿಸುವ ಕಾರ್ಯದಲ್ಲಿ ಅತ್ಯಂತ ಆವಶ್ಯಕವಾಗಿರುತ್ತದೆ. ಕಿಟಕಿಯ ಗಾಜನ್ನು ಹಿಡಿದು ಕಿಟಕಿಯ ಮೇಲೆ ಎತ್ತರಕ್ಕೆ ಏರುವ ಬಗ್ಗೆ ತಂದೆಯ ಪ್ರಶಂಸೆ ಮತ್ತು ಅದೇ ಕೃತ್ಯಕ್ಕಾಗಿ ತಾಯಿಯು ಕೋಪಗೊಳ್ಳುವುದು, ಹೀಗೆ ಆಗಬಾರದು. ಶಿಕ್ಷೆಯನ್ನು ಯಾವಾಗ ಕೊಡಬೇಕು ಎನ್ನುವುದರ ಬಗ್ಗೆ ಮತಭೇದವನ್ನು ಪಾಲಕರು ಮೊದಲೇ ದೂರಗೊಳಿಸಿಕೊಂಡಿರಬೇಕು. ಮಕ್ಕಳೆದುರು ಬಿಡಿಸಬಾರದು.
೪. ತಪ್ಪು ಘಟಿಸಿದಲ್ಲಿ ತಕ್ಷಣ ಶಿಕ್ಷೆಯನ್ನು ಕೊಡಬೇಕು. "ಇರು, ಸಂಜೆಗೆ ತಂದೆಯು ಬರಲಿ, ನಂತರ ನೋಡುತ್ತೇನೆ" ಎನ್ನುವುದು ತಪ್ಪು ಶಿಕ್ಷೆಯಾಗಿದೆ. ಅದರಿಂದಾಗಿ ತಂದೆಯು ಬರುವವರೆಗೆ ಮಗುವು ಶಿಕ್ಷೆಯ ಚಿಂತೆಯಲ್ಲಿರುತ್ತದೆ.
ಮಗುವು ಮಾಡಿದ ತಪ್ಪಿಗೆ ತುಲನೆಯಲ್ಲಿ ಶಿಕ್ಷೆಯು ಹೊಂದಾಣಿಕೆಯಾಗುವಂತಿರಬೇಕು. ನಮ್ಮ ಶಾಲೆಯ ಪ್ರಾಚಾರ್ಯ ಹಾಗೂ ಗುರುವರ್ಯರು ಅತಿಶಯ ಸಾತ್ತ್ವಿಕ ಮತ್ತು ಶಾಂತ ಗೃಹಸ್ಥರು. ಅವರ ಬಳಿ ಯಾವುದೇ ವಿದ್ಯಾರ್ಥಿಯು ಭಯದಿಂದ ಹೋಗದೇ ಆದರದಿಂದ ಮತ್ತು ಪ್ರೇಮದಿಂದ ಹೋಗುತ್ತಿದ್ದನು. ಒಂದು ದಿನ ನಾನು ಅವರಿಗೆ ಭೇಟಿಯಾಗಲು ಹೋದಾಗ ಒಬ್ಬ ೧೦ ನೇ ತರಗತಿಯ ಹುಡುಗನಿಗೆ ಛಡಿಯಿಂದ (ಕೋಲಿನಿಂದ) ಬಹಳ ಹೊಡೆಯುತ್ತಿದ್ದರು. ಕಾಳೆ ಗುರೂಜಿಯವರ ರೌದ್ರಾವತಾರವನ್ನು ನೋಡಿ ನಾನೇ ಬೆಚ್ಚಿಬಿದ್ದೆ. ನಂತರ ಅವರನ್ನು ಭೇಟಿಯಾದಾಗ ಅವರು ಹೇಳಿದರು, "ನಿನ್ನೆ ಈ ವಿದ್ಯಾರ್ಥಿಯು ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ನನ್ನ ಬಳಿಯಿಂದ ೫೦ ರೂಪಾಯಿಗಳನ್ನು ತೆಗೆದುಕೊಂಡು ಹೋದನು. ನಾನು ಅವನಿಗೆ ನೀಡಿದೆ. ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಅವನ ತಾಯಿಯು ಸಿಕ್ಕಳು. ಈ ಹುಡುಗನಿಗೆ ಜನ್ಮವಿಡೀ ನೆನಪಿನಲ್ಲಿರಬೇಕು ಅಂತಹ ಶಿಕ್ಷೆಯೇ ಯೋಗ್ಯವಾಗಿದೆ. ಇಲ್ಲವಾದರೆ ಅವನು ಪಕ್ಕಾ ಮೋಸಗಾರನಾಗುತ್ತಿದ್ದ.
೧. ಒಳ್ಳೆಯ ವರ್ತನೆಯ ಸ್ತುತಿ ಮತ್ತು ತಪ್ಪುವರ್ತನೆಗೆ ಶಿಕ್ಷೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ಅಥವಾ ಬಹುಮಾನ ಸಿಕ್ಕಿದರೆ ಅದರ ಸ್ತುತಿಯನ್ನು ಮಾಡಬೇಕು. ಅವರ ಪ್ರಶಂಸೆಯನ್ನು ಮಾಡಬೇಕು ಎಂದರೆ ಅವರಿಗೆ ಇನ್ನೂ ಒಳ್ಳೆಯದಾಗಿ ವರ್ತಿಸುವುದಕ್ಕೆ ಪ್ರೋತ್ಸಾಹನೆಯು ಸಿಗುವುದು. ಅವರ ತಪ್ಪುನಡವಳಿಕೆಗೆ ಕೋಪವನ್ನು ವ್ಯಕ್ತ ಮಾಡಬೇಕು ಮತ್ತು ಅವಶ್ಯವೆನಿಸಿದಲ್ಲಿ ಶಿಕ್ಷೆಯನ್ನೂ ನೀಡಬೇಕು.
೨. ಆಜ್ಞೆಯನ್ನು ಮಾಡದೇ ವಿನಂತಿಯನ್ನು ಮಾಡಬೇಕು. "ನೀರನ್ನು ತಾ", ಎಂದು ಹೇಳದೇ "ರಾಜಾ ನನಗೊಂದು ಗ್ಲಾಸು ನೀರನ್ನು ತಂದುಕೊಡಬಹುದಾ ?", ಎಂದು ವಿನಂತಿಯನ್ನು ಮಾಡಬೇಕು.
೩. ಮನೆಯಲ್ಲಿನ ಸದಸ್ಯರ ಒಮ್ಮತ-ಮಗುವಿಗೆ ಶಿಸ್ತನ್ನು ಹಚ್ಚುವ ಮೊದಲು ಮಗುವಿನಿಂದ ಯಾವ ರೀತಿಯ ನಡವಳಿಕೆಯ ಅಪೇಕ್ಷೆಯಿದೆಯೆನ್ನುವುದರ ವಿಚಾರವನ್ನು ಮಾಡಿ ನಮ್ಮ ಭೂಮಿಕೆಯನ್ನು ನಿಶ್ಚಿತಗೊಳಿಸಬೇಕು ಮತ್ತು ಎರಡು ಮತಗಳಾಗಲು ಬಿಡಬಾರದು. ತಾಯಿ-ತಂದೆಯ ಹಾಗೂ ಮನೆಯಲ್ಲಿನ ಇತರ ಸದಸ್ಯರ ಒಮ್ಮತವು ಮಗುವಿಗೆ ಶಿಸ್ತನ್ನು ಕಲಿಸುವ ಕಾರ್ಯದಲ್ಲಿ ಅತ್ಯಂತ ಆವಶ್ಯಕವಾಗಿರುತ್ತದೆ. ಕಿಟಕಿಯ ಗಾಜನ್ನು ಹಿಡಿದು ಕಿಟಕಿಯ ಮೇಲೆ ಎತ್ತರಕ್ಕೆ ಏರುವ ಬಗ್ಗೆ ತಂದೆಯ ಪ್ರಶಂಸೆ ಮತ್ತು ಅದೇ ಕೃತ್ಯಕ್ಕಾಗಿ ತಾಯಿಯು ಕೋಪಗೊಳ್ಳುವುದು, ಹೀಗೆ ಆಗಬಾರದು. ಶಿಕ್ಷೆಯನ್ನು ಯಾವಾಗ ಕೊಡಬೇಕು ಎನ್ನುವುದರ ಬಗ್ಗೆ ಮತಭೇದವನ್ನು ಪಾಲಕರು ಮೊದಲೇ ದೂರಗೊಳಿಸಿಕೊಂಡಿರಬೇಕು. ಮಕ್ಕಳೆದುರು ಬಿಡಿಸಬಾರದು.
೪. ತಪ್ಪು ಘಟಿಸಿದಲ್ಲಿ ತಕ್ಷಣ ಶಿಕ್ಷೆಯನ್ನು ಕೊಡಬೇಕು. "ಇರು, ಸಂಜೆಗೆ ತಂದೆಯು ಬರಲಿ, ನಂತರ ನೋಡುತ್ತೇನೆ" ಎನ್ನುವುದು ತಪ್ಪು ಶಿಕ್ಷೆಯಾಗಿದೆ. ಅದರಿಂದಾಗಿ ತಂದೆಯು ಬರುವವರೆಗೆ ಮಗುವು ಶಿಕ್ಷೆಯ ಚಿಂತೆಯಲ್ಲಿರುತ್ತದೆ.
ಮಗುವು ಮಾಡಿದ ತಪ್ಪಿಗೆ ತುಲನೆಯಲ್ಲಿ ಶಿಕ್ಷೆಯು ಹೊಂದಾಣಿಕೆಯಾಗುವಂತಿರಬೇಕು. ನಮ್ಮ ಶಾಲೆಯ ಪ್ರಾಚಾರ್ಯ ಹಾಗೂ ಗುರುವರ್ಯರು ಅತಿಶಯ ಸಾತ್ತ್ವಿಕ ಮತ್ತು ಶಾಂತ ಗೃಹಸ್ಥರು. ಅವರ ಬಳಿ ಯಾವುದೇ ವಿದ್ಯಾರ್ಥಿಯು ಭಯದಿಂದ ಹೋಗದೇ ಆದರದಿಂದ ಮತ್ತು ಪ್ರೇಮದಿಂದ ಹೋಗುತ್ತಿದ್ದನು. ಒಂದು ದಿನ ನಾನು ಅವರಿಗೆ ಭೇಟಿಯಾಗಲು ಹೋದಾಗ ಒಬ್ಬ ೧೦ ನೇ ತರಗತಿಯ ಹುಡುಗನಿಗೆ ಛಡಿಯಿಂದ (ಕೋಲಿನಿಂದ) ಬಹಳ ಹೊಡೆಯುತ್ತಿದ್ದರು. ಕಾಳೆ ಗುರೂಜಿಯವರ ರೌದ್ರಾವತಾರವನ್ನು ನೋಡಿ ನಾನೇ ಬೆಚ್ಚಿಬಿದ್ದೆ. ನಂತರ ಅವರನ್ನು ಭೇಟಿಯಾದಾಗ ಅವರು ಹೇಳಿದರು, "ನಿನ್ನೆ ಈ ವಿದ್ಯಾರ್ಥಿಯು ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ನನ್ನ ಬಳಿಯಿಂದ ೫೦ ರೂಪಾಯಿಗಳನ್ನು ತೆಗೆದುಕೊಂಡು ಹೋದನು. ನಾನು ಅವನಿಗೆ ನೀಡಿದೆ. ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಅವನ ತಾಯಿಯು ಸಿಕ್ಕಳು. ಈ ಹುಡುಗನಿಗೆ ಜನ್ಮವಿಡೀ ನೆನಪಿನಲ್ಲಿರಬೇಕು ಅಂತಹ ಶಿಕ್ಷೆಯೇ ಯೋಗ್ಯವಾಗಿದೆ. ಇಲ್ಲವಾದರೆ ಅವನು ಪಕ್ಕಾ ಮೋಸಗಾರನಾಗುತ್ತಿದ್ದ.
ಯೋಗ್ಯ ಮತ್ತು ಅಯೋಗ್ಯ ಶಿಕ್ಷೆ
ಮಗುವಿನೊಂದಿಗೆ ಮಾತನಾಡದಿರುವುದು ಅಥವಾ ಮಗುವಿಗೆ ದಿನವಿಡೀ ಉಪವಾಸ, ಈ ಶಿಕ್ಷೆಗಳು ಯೋಗ್ಯವಾದುವಲ್ಲ. ಕಾರಣ ಸಂಜೆಯ ವೇಳೆಗೆ ಅದೇ ತಾಯಿಯು ಊಟಕ್ಕಾಗಿ ಮಗುವಿಗೆ ಮನವೊಲಿಸುವಳು. ಸಂಜೆಯ ವೇಳೆಗೆ ಮಗುವಿಗೆ ಆಟಕ್ಕಾಗಿ ಮನೆಯ ಹೊರಗೆ ಹೋಗಗೊಡದಿರುವುದು ಅಥವಾ ಅವನಿಗೆ ದೂರಚಿತ್ರವಾಹಿನಿಯನ್ನು ನೋಡಕೊಡದಿರುವುದು ಇವು ಯೋಗ್ಯ ಶಿಕ್ಷೆಗಳಾಗಿವೆ.
ಮಗುವಿನೊಂದಿಗೆ ಮಾತನಾಡದಿರುವುದು ಅಥವಾ ಮಗುವಿಗೆ ದಿನವಿಡೀ ಉಪವಾಸ, ಈ ಶಿಕ್ಷೆಗಳು ಯೋಗ್ಯವಾದುವಲ್ಲ. ಕಾರಣ ಸಂಜೆಯ ವೇಳೆಗೆ ಅದೇ ತಾಯಿಯು ಊಟಕ್ಕಾಗಿ ಮಗುವಿಗೆ ಮನವೊಲಿಸುವಳು. ಸಂಜೆಯ ವೇಳೆಗೆ ಮಗುವಿಗೆ ಆಟಕ್ಕಾಗಿ ಮನೆಯ ಹೊರಗೆ ಹೋಗಗೊಡದಿರುವುದು ಅಥವಾ ಅವನಿಗೆ ದೂರಚಿತ್ರವಾಹಿನಿಯನ್ನು ನೋಡಕೊಡದಿರುವುದು ಇವು ಯೋಗ್ಯ ಶಿಕ್ಷೆಗಳಾಗಿವೆ.
ಎಳೆಯ ಮನಸ್ಸಿನ ಮೇಲೆ ಸಂಸ್ಕಾರವನ್ನು ಮಾಡಿರಿ !
"ಸಾಧನೆಯ ಮೂಲ ತಳಹದಿಯೆಂದರೆ ಶಿಸ್ತು. ಪ್ರತಿಯೊಂದು ಕೃತಿಗೂ ಒಂದು ವೇಳೆ ಶಿಸ್ತು, ನಿಯಮಗಳನ್ನು ಹಾಕಿಕೊಳ್ಳದಿದ್ದರೆ, ಆ ಕೃತಿಗಳು ಅಪೂರ್ಣವಾಗುತ್ತವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಶಿಸ್ತಿನ ಕಟ್ಟುನಿಟ್ಟಿನ ಪಾಲನೆಯನ್ನು ಮಾಡಿದರೆ ಅಧ್ಯಾತ್ಮದಲ್ಲಿನ ಪ್ರಗತಿಯು ಶೀಘ್ರವಾಗಿ ಆಗುತ್ತದೆ. ಅದಕ್ಕಾಗಿ ಚಿಕ್ಕಂದಿನಿಂದಲೇ ಶಿಸ್ತಿನ ಸಂಸ್ಕಾರವನ್ನು ಎಳೆಯ ಮನಸ್ಸಿನ ಮೇಲೆ ಬಿಂಬಿಸಬೇಕು."
"ಸಾಧನೆಯ ಮೂಲ ತಳಹದಿಯೆಂದರೆ ಶಿಸ್ತು. ಪ್ರತಿಯೊಂದು ಕೃತಿಗೂ ಒಂದು ವೇಳೆ ಶಿಸ್ತು, ನಿಯಮಗಳನ್ನು ಹಾಕಿಕೊಳ್ಳದಿದ್ದರೆ, ಆ ಕೃತಿಗಳು ಅಪೂರ್ಣವಾಗುತ್ತವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಶಿಸ್ತಿನ ಕಟ್ಟುನಿಟ್ಟಿನ ಪಾಲನೆಯನ್ನು ಮಾಡಿದರೆ ಅಧ್ಯಾತ್ಮದಲ್ಲಿನ ಪ್ರಗತಿಯು ಶೀಘ್ರವಾಗಿ ಆಗುತ್ತದೆ. ಅದಕ್ಕಾಗಿ ಚಿಕ್ಕಂದಿನಿಂದಲೇ ಶಿಸ್ತಿನ ಸಂಸ್ಕಾರವನ್ನು ಎಳೆಯ ಮನಸ್ಸಿನ ಮೇಲೆ ಬಿಂಬಿಸಬೇಕು."
ಮಕ್ಕಳ ಮೇಲೆ ಸುಸಂಸ್ಕಾರವಾಗುವುದಕ್ಕಾಗಿ ಸಾಧನೆಯ ಬೆಂಬಲವನ್ನು ನೀಡುವುದು
ಮಕ್ಕಳು ಸದ್ಗುಣಿಗಳಾಗಲು ಎರಡು ವಿಷಯಗಳು ಆವಶ್ಯಕವಿರುತ್ತವೆ. ಮೊದಲನೆಯದೆಂದರೆ ಪಾಲಕರು ಸ್ವತಃ ಸದ್ಗುಣಿಗಳಾಗಿರಬೇಕು ಮತ್ತು ಎರಡನೆಯದೆಂದರೆ ಅವರಿಗೆ ಶಿಸ್ತನ್ನು ಕಲಿಸುವುದರೊಂದಿಗೆ ಅವರಿಗೆ ಭಕ್ತಿಯನ್ನು ಮಾಡಲು ಕಲಿಸಬೇಕು. ಸಾಧನೆಯ ಅಥವಾ ಉಪಾಸನೆಯ ಬೆಂಬಲವಿದ್ದರೆ ಮಕ್ಕಳಲ್ಲಿ ಸದ್ಗುಣಗಳು ತಕ್ಷಣ ಮೈಗೂಡುತ್ತವೆ. ಹಠಮಾರಿ ಅಥವಾ ಕೇಳದಿರುವ ಮಕ್ಕಳನ್ನು ಬದಲಾಯಿಸುವ ಶಕ್ತಿಯು ಭಗವಂತನ ನಾಮದಲ್ಲಿದೆ ಹಾಗೂ ಇದರ ಅನುಭವವನ್ನು ಎಷ್ಟೋ ಜನರು ತೆಗೆದುಕೊಂಡಿದ್ದಾರೆ."
ಮಕ್ಕಳು ಸದ್ಗುಣಿಗಳಾಗಲು ಎರಡು ವಿಷಯಗಳು ಆವಶ್ಯಕವಿರುತ್ತವೆ. ಮೊದಲನೆಯದೆಂದರೆ ಪಾಲಕರು ಸ್ವತಃ ಸದ್ಗುಣಿಗಳಾಗಿರಬೇಕು ಮತ್ತು ಎರಡನೆಯದೆಂದರೆ ಅವರಿಗೆ ಶಿಸ್ತನ್ನು ಕಲಿಸುವುದರೊಂದಿಗೆ ಅವರಿಗೆ ಭಕ್ತಿಯನ್ನು ಮಾಡಲು ಕಲಿಸಬೇಕು. ಸಾಧನೆಯ ಅಥವಾ ಉಪಾಸನೆಯ ಬೆಂಬಲವಿದ್ದರೆ ಮಕ್ಕಳಲ್ಲಿ ಸದ್ಗುಣಗಳು ತಕ್ಷಣ ಮೈಗೂಡುತ್ತವೆ. ಹಠಮಾರಿ ಅಥವಾ ಕೇಳದಿರುವ ಮಕ್ಕಳನ್ನು ಬದಲಾಯಿಸುವ ಶಕ್ತಿಯು ಭಗವಂತನ ನಾಮದಲ್ಲಿದೆ ಹಾಗೂ ಇದರ ಅನುಭವವನ್ನು ಎಷ್ಟೋ ಜನರು ತೆಗೆದುಕೊಂಡಿದ್ದಾರೆ."
ಭಕ್ತಿಯ ಬೀಜವನ್ನು ಸ್ವಂತದ ಹೃದಯಕಮಲದ ಮೇಲೆ ಬಿತ್ತುವುದರಿಂದ ಆ ಬೀಜವು ಮಕ್ಕಳಲ್ಲಿ ನಿರ್ಮಾಣವಾಗುವುದು
ಈ ಎಲ್ಲ ಸ್ಥಿತಿಯನ್ನು ಬದಲಾಯಿಸಲು ನಮಗೆ ಜೀವನದಲ್ಲಿ ಅಧ್ಯಾತ್ಮದ, ಭಕ್ತಿಯ ಅವಶ್ಯಕತೆಯಿರುತ್ತದೆ. ಮೊದಲು ಪಾಲಕರು ಭಕ್ತಿಯ ಬೀಜವನ್ನು ಸ್ವಂತದ ಹೃದಯಕಮಲದಲ್ಲಿ ಬಿತ್ತಬೇಕು. ಅಂದಾಗಲೇ ಆ ಬೀಜವು ಅವರ ಮಕ್ಕಳಲ್ಲಿ ನಿರ್ಮಾಣವಾಗುವುದು. "ವಾಲ್ಯಾ ಇದ್ದವನು ವಾಲ್ಮೀಕಿಯಾದನು", ಎಂಬ ಕತೆಗಳನ್ನು ನಾವು ಹೇಳುತ್ತೇವೆ, ಆದರೆ ಸ್ವತಃ ಮಾತ್ರ ಸಾಧನೆಯನ್ನು ಮಾಡುವುದಿಲ್ಲ. "ಭಗವಂತನ ನಾಮದಲ್ಲಿಯೇ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಕ್ಷಮತೆಯಿರುವ ಅರಿವು ಎಲ್ಲ ಪಾಲಕರಿಗೆ ಆಗಲಿ ಮತು ಎಲ್ಲ ಪಾಲಕರ ಮಾಧ್ಯಮದಿಂದ ಸುಸಂಸ್ಕಾರಿತ ಸದ್ಗುಣಿ ಪೀಳಿಗೆಯು ರಾಷ್ಟ್ರಕ್ಕೆ ದೊರಕಿ ಈಶ್ವರೀ ರಾಜ್ಯವು ಶೀಘ್ರವಾಗಿ ಬರಲಿ", ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.
ಈ ಎಲ್ಲ ಸ್ಥಿತಿಯನ್ನು ಬದಲಾಯಿಸಲು ನಮಗೆ ಜೀವನದಲ್ಲಿ ಅಧ್ಯಾತ್ಮದ, ಭಕ್ತಿಯ ಅವಶ್ಯಕತೆಯಿರುತ್ತದೆ. ಮೊದಲು ಪಾಲಕರು ಭಕ್ತಿಯ ಬೀಜವನ್ನು ಸ್ವಂತದ ಹೃದಯಕಮಲದಲ್ಲಿ ಬಿತ್ತಬೇಕು. ಅಂದಾಗಲೇ ಆ ಬೀಜವು ಅವರ ಮಕ್ಕಳಲ್ಲಿ ನಿರ್ಮಾಣವಾಗುವುದು. "ವಾಲ್ಯಾ ಇದ್ದವನು ವಾಲ್ಮೀಕಿಯಾದನು", ಎಂಬ ಕತೆಗಳನ್ನು ನಾವು ಹೇಳುತ್ತೇವೆ, ಆದರೆ ಸ್ವತಃ ಮಾತ್ರ ಸಾಧನೆಯನ್ನು ಮಾಡುವುದಿಲ್ಲ. "ಭಗವಂತನ ನಾಮದಲ್ಲಿಯೇ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಕ್ಷಮತೆಯಿರುವ ಅರಿವು ಎಲ್ಲ ಪಾಲಕರಿಗೆ ಆಗಲಿ ಮತು ಎಲ್ಲ ಪಾಲಕರ ಮಾಧ್ಯಮದಿಂದ ಸುಸಂಸ್ಕಾರಿತ ಸದ್ಗುಣಿ ಪೀಳಿಗೆಯು ರಾಷ್ಟ್ರಕ್ಕೆ ದೊರಕಿ ಈಶ್ವರೀ ರಾಜ್ಯವು ಶೀಘ್ರವಾಗಿ ಬರಲಿ", ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.
೨ ರಿಂದ ೫ ವರ್ಷದವರೆಗಿನ ಮಕ್ಕಳಲ್ಲಿ ಯಾವ ಯಾವ ರೂಢಿಯನ್ನು ಬೆಳೆಸಬೇಕು ?
ಬಾಲಮನಸ್ಸಿನ ಮೇಲೆ ಯಾವ ಸಂಸ್ಕಾರವನ್ನು ಮಾಡಲಾಗುತ್ತದೆಯೋ ಅದಕ್ಕನುಸಾರ ಮುಂದಿನ ಕಾಲದಲ್ಲಿ ಮಕ್ಕಳಿಗೆ ರೂಢಿಯು ಬೆಳೆಯುತ್ತದೆ. ಚಿಕ್ಕವಯಸ್ಸಿನಲ್ಲಿ ಆಗುವ ಸಂಸ್ಕಾರಗಳ ಮೇಲೆಯೇ ಮಕ್ಕಳ ರಚನೆಯು ಅವಲಂಬಿಸಿರುತ್ತದೆ. ಸ್ವಂತದ ಮಕ್ಕಳ ಮೇಲೆ ಯಾವ ಸಂಸ್ಕಾರವನ್ನು ಮಾಡುವುದು, ಎನ್ನುವ ಪ್ರಶ್ನೆಯು ಸರ್ವೇಸಾಮಾನ್ಯವಾಗಿ ಅನೇಕರಲ್ಲಿ ಉದ್ಭವಿಸಬಹುದು. ಅದಕ್ಕಾಗಿ ಮಕ್ಕಳಲ್ಲಿ ಯಾವ ನಡವಳಿಕೆಯನ್ನು ಬೆಳೆಸಬೇಕು ಎನ್ನುವ ವಿಷಯದಲ್ಲಿ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
ಈ ಗುಂಪಿನ ಮಕ್ಕಳಲ್ಲಿ ಕೆಳಗಿನ ಅಭ್ಯಾಸವನ್ನು ಬೆಳೆಸಬೇಕು ಹಾಗೆಯೇ ಸಂಸ್ಕಾರವನ್ನೂ ಮಾಡಬೇಕು
- ಊಟದ ಮೊದಲು ಕೈ-ಕಾಲು ಮತ್ತು ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು.
- ತಾವೇ ಸ್ವತಃ ಊಟವನ್ನು ಮಾಡುವುದು.
- ಪ್ರತಿಯೊಂದು ಊಟದ ನಂತರ ಅಥವಾ ಏನನ್ನಾದರೂ ತಿಂದ ನಂತರ ಬಾಯಿಯನ್ನು ಮುಕ್ಕಳಿಸುವುದು ಮತ್ತು ಹಲ್ಲುಗಳನ್ನು ಸ್ವಚ್ಛವಾಗಿ ತಿಕ್ಕುವುದು.
- ಮಲವಿಸರ್ಜನೆಯ ನಂತರ ಸ್ವತಃ ಗುದದ್ವಾರದ ಭಾಗವನ್ನು ಮತ್ತು ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು.
- ಸ್ವತಂತ್ರವಾಗಿ ಬೇರೆ ಹಾಸಿಗೆಯ ಮೇಲೆ ಮಲಗುವುದು ಮತ್ತು ಅವಶ್ಯವಿದ್ದಲ್ಲಿ ರಾತ್ರಿಯಲ್ಲಿ ಕಡಿಮೆ ಬೆಳಕಿರುವ ದೀಪದ ಉಪಯೋಗವನ್ನು ಮಾಡುವುದು.
- ಸೀನಬೇಕಾದರೆ ಮತ್ತು ಕೆಮ್ಮಬೇಕಾದರೆ ಮೂಗು-ಬಾಯಿಯ ಮೇಲೆ ಕರವಸ್ತ್ರವನ್ನಿಟ್ಟುಕೊಳ್ಳುವುದು.
- "ಧನ್ಯವಾದ" "ನಮಸ್ಕಾರ"ದಂತಹ ಶಬ್ದಗಳ ಉಪಯೋಗವನ್ನು ಮಾಡಿ ಜನರ ಸ್ವಾಗತವನ್ನು ಮಾಡುವುದು.
- ಆಟವಾಡಿದ ನಂತರ ಸ್ವಂತದ ಆಟಿಕೆಗಳನ್ನು ಕಪಾಟಿನಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುವುದು.
- ಶೂರವೀರರ ಕಥೆಗಳನ್ನು ಕೇಳುವುದು.
- ಸುಭಾಷಿತಗಳು, ನಿತ್ಯಪಾಠಗಳನ್ನು ಬಾಯಿಪಾಠ ಮಾಡಿ ಯೋಗ್ಯವಾದ ಜಾಗಗಳಲ್ಲಿ ಅವುಗಳ ಉಪಯೋಗವನ್ನು ಮಾಡುವುದು.
- ರಾತ್ರಿ ಮಲಗುವ ಮೊದಲು ಹಾಗೂ ಬೆಳಿಗ್ಗೆ ಎದ್ದ ನಂತರ ದೇವರ ನಾಮಸ್ಮರಣೆಯನ್ನು ಮಾಡುವುದು.
- ಪ್ರತಿದಿನವೂ ಎಲ್ಲ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡುವುದು.
Saturday, 20 August 2011
ಮಗುವಿನ ಹಕ್ಕುಗಳು
ಭಾರತದಲ್ಲಿನ 300 ದಶಲಕ್ಷ ಮಕ್ಕಳಲ್ಲಿ ಬಹುತೇಕ ಮಕ್ಕಳು ತಮ್ಮ ಶಾರೀರಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ತಡೆಯೊಡ್ಡುವ ಸಾಮಾಜಿಕ ಮತ್ತು ಆರ್ಥಿಕ ಪರಿಸರದಲ್ಲಿ ಜೀವಿಸುತ್ತಿದ್ದಾರೆ ಎಂಬುದು ವಾಸ್ತವ. ಭವಿಷ್ಯದ ವಿಚಾರಪೂರಿತ, ಸದೃಢ ಭಾರತವನ್ನು ನಿರ್ಮಾಣ ಮಾಡಲು ಮಕ್ಕಳ ಇಂತಹ ಅಗತ್ಯಗಳಿಗೆ ಸ್ಪಂದಿಸಲು ನಾವೆಲ್ಲಾ ಸಿದ್ಧರಾಗಬೇಕಾದುದು ಸದ್ಯದ ಆವಶ್ಯಕತೆಯಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯೋತ್ತರ ದಶಕಗಳು ಮಕ್ಕಳ ಅಗತ್ಯಗಳ ಸಂವೈಧಾನಿಕ ನೀಡಿಕೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಕಾಯಿದೆ ರಚನೆಗಳ ಮೂಲಕ ಸರ್ಕಾರದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯನ್ನು ಕಂಡಿದೆ. ಈ ಶತಮಾನದ ಹಿಂದಿನ ದಶಕದಲ್ಲಿ ನಾಟಕೀಯ ತಾಂತ್ರಿಕ ಅಭಿವೃದ್ದಿಯು, ಮಕ್ಕಳನ್ನು ಉದ್ದೇಶಿಸಿದ, ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ ಮತ್ತು ಇತರ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವಕಾಶಗಳ ನವೀನ ಆಯಾಮವನ್ನೇ ತೆರೆದಿಟ್ಟಿದೆ.
ಭಾರತದಲ್ಲಿ, ಮಕ್ಕಳನ್ನೇ ಉದ್ದೇಶಿಸಿದ, ಅವರ ಸಮಸ್ಯೆಗಳಿಗೆ ಗಮನ ಕೇಂದ್ರೀಕರಿಸಿದ ಕಾರ್ಯಗಳಿಗಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೆಲ್ಲಾ ಈಗ ಕೈಜೋಡಿಸಿವೆ. ಇದರಲ್ಲಿ ಮಕ್ಕಳು ಮತ್ತು ದುಡಿಮೆಗೆ ಸಂಬಂಧಿಸಿದ ವಿಷಯಗಳು, ಬಾಲದುಡಿಮೆಯ ಸವಾಲುಗಳನ್ನು ಪರಿಹರಿಸುವುದು, ಹೆಣ್ಣು ಶಿಶುವಿಗೆ ತೋರುವ ತಾರತಮ್ಯದ ನಿವಾರಣೆ, ಬೀದಿ ಮಕ್ಕಳನ್ನು ಮೇಲೆತ್ತುವುದು, ವಿಕಲ ಚೇತನ ಮಕ್ಕಳ ವಿಶೇಷ ಅಗತ್ಯಗಳನ್ನು ಗುರುತಿಸಿ ಪೂರೈಸುವುದು ಮತ್ತು ಅವರ ಮೂಲಭೂತ ಹಕ್ಕಾದ ಶಿಕ್ಷಣವು ಪ್ರತೀ ಮಗುವಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲಾ ಸೇರಿವೆ.
ಮೊಲದ ಮರಿ... ಮೊಲದ ಮರಿ...

ಮೊಲದ ಮರಿ ಮೊಲದ ಮರಿ
ಆಡು ಬಾರೇ..
ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ
ದೊಡ್ಡದಾದ ಕಾಡಿನೊಳಗೆ
ಏನು ಮಾಡುವೆ
ಹೆಡ್ಡ ನೀನು ಪೊದರಿನೊಳಗೆ
ಏಕೆ ಅಡಗುವೆ?
ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ
ಗಿಡ್ಡ ಬಾಲ ದೊಡ್ದ ಕಿವಿಯು
ನಿನಗೆ ಚೆಂದ
ಎದ್ದು ಎನ್ನ ಬಳಿಗೆ ಬಂದು
ಆಡೊ ಕಂದ
ಗೂಡು ಕಟ್ಟಿತಿಂಡಿ ಕೊಡುವೆ
ಪ್ರೀತಿಯಿಂದ
ಕಾಡಬಿಟ್ಟು ಊರ ಸೇರೋ
ಮೊಲದ ಕಂದಾ
ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೇ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೇ
**********
ಚಿಂವ್ ಚಿಂವ್ ಗುಬ್ಬಿ...

ಗುಬ್ಬಿ ಗುಬ್ಬಿ
ಚಿಂವ್ ಚಿಂವ್
ಎಂದು ಕರೆಯುವೆ ಯಾರನ್ನು?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?
ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ?
ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಿಲ್ಲಿ?
ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ
ಹಣ್ಣನು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ
ಪುಣ್ಯಕೋಟಿ ಎಂಬ ಗೋವಿನ ಹಾಡು
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯ ನಾನೆಂತು ಪೇಳ್ವೆನು.
ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೋಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು.
ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ.
ಕರುಗಳನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರನೆ
ಪರಿದು ಲಂಘ್ಹಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ.
ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು.
ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ.
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ.
ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ನೀನು ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು.
ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದುವಾಗ
ಚೆಲ್ಲಿ ಸೂಸಿ ಪಾಲ ಕರೆದು
ಅಲ್ಲಿ ತುಂಬಿತು ಬಿಂದಿಗೆ.
ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು.
ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು.
ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ.
ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು.
ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು.
ಒಂದು ಬಿನ್ನಹ ಹುಲಿಯೆ ಕೇಳೈ
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.
ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು.
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.
ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದನಿನ್ನನು ನೋಡಿ ಹೋಗುವೆ
ನೆಂದು ಬಂದೆನೆ ದೊಡ್ಡಿಗೆ.
ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು.
ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.
ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು.
ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು.
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು.
ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗ ಬೇಡ
ದುಷ್ತವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ.
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ರುಣ ತೀರಿತೆಂದು
ತಬ್ಬಿ ಕೊಂಡಿತು ಕಂದನ.
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು.
ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು.
ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು.
ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.
Subscribe to:
Posts (Atom)