Thursday 4 September 2014

ನೀರುಳಿತಾಯದ ಎರಡು ಮಾದರಿಗಳು

 
ನೀರುಳಿತಾಯದ ಎರಡು ಮಾದರಿಗಳು
ನಲ್ಲಿಯ ಕೆಳಗೆ ಇಟ್ಟಿದ್ದ ಪುಟ್ಟ ಬಕೆಟ್ ನೋಡಿ ರಮ ಕೇಳಿದರು. ಇದೇಕೆ? ನಲ್ಲಿಯಿಂದ ತೊಟ್ಟಿಕ್ಕುತ್ತಿದ್ದ ನೀರು ಹನಿ ಹನಿಯಾಗಿ ತುಂಬಿಕೊಳ್ಳುತ್ತಿತ್ತು. ಗಿಡಕ್ಕೆ ಹಾಕಲು ಎಂದಿದ್ದಕ್ಕೆ ನಲ್ಲಿ ರಿಪೇರಿ ಮಾಡಿಸೋದು ತಾನೇ ಅಂದ ರಮನಿಗೆ ದೊರೆತ ಉತ್ತರ ನೀವೂ ಕೇಳುವಂತಹುದೇ.
ಹೌದು. ಮಾಡಿಸಬಹುದು. ಹದಿನೈದು ದಿನ ಸರಿಯಾಗಿರುವ ನಲ್ಲಿ ರಿಪೇರಿಗೆ ೧೦೦ರೂ ಕೊಡಬೇಕು. ಅದರ ಬದಲಿಗೆ ನಲ್ಲಿ ಕೆಳಗೆ ಬಕೀಟಿಟ್ಟು ತುಂಬಿದಾಗೆಲ್ಲ ಗಿಡಗಳಿಗೆ ಹಾಕುತ್ತೀನಿ. ದಿನಕ್ಕೆ ಮೂರು ಬಾರಿ, ಅಂದರೆ ನಮ್ಮ ಮನೆಯ ಮುಂದಿರುವ ೩೫-೪೦ ಕುಂಡಗಳಲ್ಲಿರುವ ಗಿಡಗಳಿಗೆ ಇಷ್ಟು ನೀರು ಸಾಕಾಗುತ್ತೆ. ಒಂದು ಬಕೆಟ್ ನೀರು ಮೋರಿಗೆ ಹೋಗದಂತೆ ನೋಡಿಕೊಂಡರೆ, ಒಂದು ಬಕೆಟ್ ನೀರು ಉಳಿಸಿದಂತೆ ಅಲ್ವಾ?
ಮಾತು ಮುಗಿಯುವ ವೇಳೆಗೆ ಮನಸ್ಸು ಹತ್ತು ವರ್ಷಗಳ ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕುತ್ತಿತ್ತು. ಧರ್ಮಪುರಿಯಲ್ಲಿದ್ದ ಮೀನಾಕ್ಷಿ ಮನೆ ಅವರೇ ಕಟ್ಟಿದ್ದು. ಸ್ವತಃ ವಾಸ್ತು ಶಿಲ್ಪಿಯಾಗಿದ್ದ ಅವರು ಮನೆಯನ್ನು ‘ಎಕೊ ಫ್ರೆಂಡ್ಲಿ’ಯಾಗಿ ಕಟ್ಟಿದ್ದರು. ಮಳೆನೀರ ಸಂಗ್ರಹಕ್ಕಾಗಿ ತೊಟ್ಟಿ, ಯತೇಚ್ಛವಾಗಿ ಬರುವ ಗಾಳಿ ಬೆಳಕನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರು. ಆದರೆ ಕಣ್ಣು ಕುಕ್ಕುವಂತೆ ಕಾಣಿಸುತ್ತಿದ್ದುದು ನಲ್ಲಿಯ ಕೆಳಗೆ ಇಟ್ಟಿದ್ದ ಬಣ್ಣದ ಪ್ಲಾಸ್ಟಿಕ್ ಬಕೀಟು. ಅದರ ಕುರಿತು ಮೀನಾಕ್ಷಿ ಹೇಳಿದ ಮಾತು ಸುಲಭದಲ್ಲಿ ಮರೆಯುವಂತಹುದಲ್ಲ. ‘ಎಷ್ಟೇ ಭದ್ರವಾಗಿ ನಿಲ್ಲಿಸಿದರೂ ಕೆಲವೊಮ್ಮೆ ನಲ್ಲಿ ಸೋರುತ್ತೆ. ಹನಿ ಹನಿ ನೀರು ತುಂಬ ಮುಖ್ಯ. ಗಿಡಗಳಿಗೆ ಹಾಕಲು, ಕೈಕಾಲು ತೊಳೆಯಲು ಈ ನೀರು ಬಳಸುತ್ತೀವಿ. ಬಂಗಾರಕ್ಕಿಂತ ಹೆಚ್ಚು ಬೆಲೆ ನೀರಿಗೆ ನಮ್ಮಲ್ಲಿ’.
ನೀರುಳಿತಾಯದ ಎರಡು ಮಾದರಿಗಳು
ಆ ಮಾತು ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ, ನಲ್ಲಿ ಕೆಳಗೆ ಬಕೀಟು ಇಡದೆ ಇದ್ದರೆ ‘ಗಿಲ್ಟ್’ ಕಾಡುತ್ತೆ. ದೊಡ್ಡ ಅಪರಾಧ ಮಾಡಿದಂತೆ ಅನ್ನಿಸುತ್ತೆ. ಅಂದಿನಿಂದ ಈ ಅಭ್ಯಾಸ. ‘ಇನ್ನು ಮುಂದೆ ನಾವೂ ಅದೇ ಅಭ್ಯಾಸ ಮಾಡಿಕೊಳ್ಳುತ್ತೀವಿ’ ಎಂದು ಹೇಳಿದ ಮಾತು ಕಿವಿಗಷ್ಟೇ ಅಲ್ಲ, ಮನಸ್ಸಿಗೂ ತಂಪು ತರುವಂತಿತ್ತು. ಹತ್ತು ಮಾತಿಗಿಂತ ಒಂದು ಕೃತಿ ಲೇಸು. ಮನಸ್ಸಿನ ಮೇಲೆ ಪ್ರಭಾವ ಬೀರುವುದೆಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ ಅನ್ನಿಸಿತು.
ಸಾಕ್ಷಿ ಅಂದಾಗ ಮೊನ್ನೆ ಮೈಸೂರಿಗೆ ಹೋದಾಗ ‘ಕಾನನ’ ಸಾವಯವ ಫಾರ್ಮ್‌ನಲ್ಲಿ ನೋಡಿದ ಮಳೆನೀರು ಕೊಯಿಲಿಗಾಗಿ ಮಾಡಿದ್ದ ಸುಂದರ ಆಕಾರದ ಪೀಪಾಯಿ ಕಣ್ಮುಂದೆ ಬಂತು. ಒಂದು ಸಾವಿರ ಲೀಟರ್ ನೀರು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ಉಳ್ಳ ಎರೆಡು ಪೀಪಾಯಿಗಳು ಮನೆಯ ಎರೆಡೂ ಪಕ್ಕಗಳಲ್ಲಿ. ಮನೆಯ ಹಿಂಭಾಗದಲ್ಲಿ ಎರೆಡು ಸಾವಿರ ನೀರು ಹಿಡಿಸುವ ನೀರಿನ ಟ್ಯಾಂಕ್. ಇದರ ಕಥೆಯನ್ನು ಗುರು ಪ್ರಸಾದ್ ಬಾಯಲ್ಲೇ ಕೇಳಬೇಕು.
‘ಪರಿಸರ  ಸ್ನೇಹಿ ಮನೆ ಕಟ್ಟಿದಾಗ ಮಳೆನೀರ ಕೊಯಿಲು ಮಾಡಲೇಬೇಕೆಂಬ ಆಲೋಚನೆ ಬಂತು. ಅದನ್ನು ನಾವೇ ಮಾಡಬೇಕೆಂದು ಕೊಂಡೆವು. (ಈ ಮನೆ ಮತ್ತು ಕಾನನ ತೋಟ, ಮೂರು ಕುಟುಂಬಗಳ ಸಹಕಾರಿ ಸಹಭಾಗಿತ್ವದಲ್ಲಿದೆ.) ಜಿ ಐ ತಂತಿ ಬಳಸಿ ‘ಕೊಡ’ದ ಆಕಾರ ಮಾಡಿಕೊಂಡೆವು. ಅದರ ಮೇಲೆ ಗೋಣಿ ಚೀಲ ಸುತ್ತಿ ಮಣ್ಣು ಮೆತ್ತಿ ಈ ಆಕಾರ ಬರುವಂತೆ ಮಾಡಿದೆವು. ನಂತರ ಅದರ ಮೇಲೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದೇವೆ. ಮೇಲ್ಭಾಗದಲ್ಲಿ ಒಂದು ದೊಡ್ಡ ಸಿಮೆಂಟ್ ಕುಂಡ ಇಟ್ಟಿದ್ದೇವೆ. ಅದು ‘ಫಿಲ್ಟರ್’ ತರಹ ಕೆಲಸ ಮಾಡುತ್ತೆ. ಅದರ ಒಳಗೆ ಜಲ್ಲಿ, ಮರಳು, ಮೇಲೆ ಫಿಲ್ಟರ್ ಬಟ್ಟೆ ಹಾಕಿದ್ದೇವೆ. ಮನೆಯ ಮೇಲಿನ ಹೆಂಚಿನಿಂದ ಇಳಿದು ಬರುವ ನೀರು ಮೊದಲು ಪಕ್ಕದಲ್ಲಿರುವ ದೊಡ್ಡ ಕೊಳವೆಯೊಳಗೆ ಹೋಗುತ್ತದೆ. ಅದು ತುಂಬುವ ವೇಳೆಗೆ ಮಣ್ಣು ಕೆಳಗೆ ನಿಲ್ಲುತ್ತದೆ. ಮೇಲಿನಿಂದ ಹರಿಯುವ ನೀರು ಫಿಲ್ಟರ್ ಕುಂಡದಲ್ಲಿ ಇಳಿದು ನಂತರ ಪೀಪಾಯಿಯಲ್ಲಿ ಸಂಗ್ರಹವಾಗುತ್ತದೆ.
ಕುಡಿಯಲು, ಅಡಿಗೆ ಮಾಡಲು ಈ ನೀರನ್ನು ಬಳಸುತ್ತೀವಿ. ಅನಿಯಮಿತ ವಿದ್ಯುಚ್ಯಕ್ತಿಯಾದ್ದರಿಂದ ಕೆಲವೊಮ್ಮೆ ಗಿಡಗಳಿಗೂ ಬಳಸುವುದುಂಟು. ಇದರ ಆಕಾರ, ಬಣ್ಣ, ತೋಟ ನೋಡಲು ಬಂದವರಿಗೆ ಮೊದಲು ಕಾಣಿಸುತ್ತೆ. ಅಂಗೈಯೊಳಗೆ ಬೀಳುತ್ತಿರುವ ಹನಿ ಹನಿ ನೀರು, ಕೆಳಗಿರುವ ನಲ್ಲಿ ಇದು ಕುಡಿಯುವ ನೀರೆಂದು ಕೂಗಿ ಹೇಳುತ್ತದೆ. ಜೊತೆಗೇ ನೀರಿನ ಪಾಠ ಸಹ. ನಲ್ಲಿ ತಿರುಗಿಸಿದಾಗ ಚೆಲ್ಲುವ, ಬೀಳುವ, ತೊಟ್ಟಿಕ್ಕುವ ನೀರು ಕೆಳಗಿನ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ನೋಡಿ, ನೀರು ಕುಡಿದ ಹಲವರ ಬಾಯಲ್ಲಿ ಉದ್ಗಾರ. ‘ಇಷ್ಟು ಸುಲಭನಾ ಮಳೆ ನೀರ ಕೊಯಿಲು, ನೀರೆಷ್ಟು ಸಿಹಿಯಾಗಿದೆ’. ಹಲವರು ಈ ಪದ್ಧತಿಯನ್ನು ಅನುಸರಿಸುತ್ತಿರುವುದನ್ನು ನೋಡಿದಾಗ, ಮಾತಾಡುವುದಕ್ಕಿಂತ ಮಾಡಿ ತೋರಿಸುವುದು ಮೇಲು ಅನ್ನಿಸುತ್ತೆ ಅಂತಾರೆ ಗುರು ಪ್ರಸಾದ್.
ತೋಟ ಸುತ್ತಿ ಬಂದು ಮನೆಯ ಹತ್ತಿರ ಇರುವ ‘ಸೋಲಾರ್ ಕುಕ್ಕರ್’ ಒಳಗಿರುವ ‘ಅಸ್ತ್ರ ಒಲೆ’ ಬಯೋ ಗ್ಯಾಸ್ ನೋಡಿ ಬಂದು, ಒಂದು ಲೋಟ ನೀರು ಕುಡಿದರೆ ‘ಆಹಾ ಎಂಥ ರುಚಿ’ ಅಂತ ತನಗೆ ತಾನೇ ಬಾಯಲ್ಲಿ ಬರುತ್ತೆ. ಯಾತಕ್ಕೆ ಬರ ಬಂದರೂ ಕುಡಿಯುವ ನೀರಿಗೆ ಬರ ಬರಬಾರದಪ್ಪ ಅಂತಾರೆ ಈ ನೀರು ಕುಡಿದವರು. ಇದಕ್ಕಿಂತ ಸಾಕ್ಷಿ ಬೇಕೇ? ನೀರು ಪೋಲು ಮಾಡುವವರ ವಿರುದ್ಧ ಸಮರ ಸಾರಿದಾಗಲೇ, ಹನಿ ಹನಿ ನೀರನ್ನು ಸಂಗ್ರಹಿಸಿದಾಗಲೇ ಮೀನಾಕ್ಷಿ, ಪ್ರಸಾದ್ ಅವರ ಸಾಲಿಗೆ ನಾವೂ ಸೇರಬಹುದು. ಏನಂತೀರಿ?
ಲೇಖನ:
ಅನುಸೂಯ ಶರ್ಮ
ಚಿತ್ರಗಳು:
ಎ. ಆರ್. ಎಸ್. ಶರ್ಮ.

ಮಕ್ಕಳೇ, ಓದುವಾಗ ತೆಗೆದುಕೊಳ್ಳಬೇಕಾದ ಜಾಗೃತೆ!


  • ಯಾವಾಗಲೂ ನೆಟ್ಟಗೆ ಕುಳಿತುಕೊಂಡು ಓದಬೇಕು. ಓದುವಾಗ ಮೇಜು ಹಾಗೂ ಕುರ್ಚಿ ಸ್ಥಿರವಾಗಿರಬೇಕು ಹಾಗೂ ಪುಸ್ತಕ ಮತ್ತು ಕಣ್ಣು ಇವುಗಳಲ್ಲಿನ ಅಂತರ ೩೦ ರಿಂದ ೩೫ ಸೆ.ಮಿ.ನಷ್ಟಿರಬೇಕು. ಓದುವ ಕೋಣೆಯಲ್ಲಿ ಸರಿಯಾಗಿ ಬೆಳಕಿರಬೇಕು. ಸಾಧ್ಯವಿದ್ದರೆ ಪುಸ್ತಕದ ಮೇಲೆ ಹಿಂದಿನಿಂದ ಅಥವಾ ಎಡ ಬದಿಯಿಂದ ಬೆಳಕು ಬೀಳಬೇಕು. ಅಂದರೆ ಪುಸ್ತಕ ಎಡ ಕೈಯಲ್ಲಿ ಹಿಡಿದು ಓದುವಾಗ ಬೆರಳುಗಳ ನೆರಳು ಬೀಳ ಬಾರದು.
  • ಓದುವಾಗ ಮಧ್ಯ-ಮಧ್ಯದಲ್ಲಿ ಕಣ್ಣು ಮುಚ್ಚ ಬೇಕು. ವಾಚನ ಹಾಗೂ ಬೆರಳಚ್ಚು, ಚಿತ್ರ ಬಿಡಿಸುವುದು, ಹೊಲಿಗೆ ಇತ್ಯಾದಿ ಹೆಚ್ಚು ಸಮಯ ಮಾಡಬೇಕಿದ್ದರೆ ಪ್ರತಿ ೧೫-೨೦ ನಿಮಿಷಕ್ಕೊಮ್ಮೆ ಸ್ವಲ್ಪ ಸಮಯ ನಿಲ್ಲಿಸಿ ೧-೨ ನಿಮಿಷ ಕಣ್ಣು ಮುಚ್ಚಿಕೊಳ್ಳಬೇಕು ಮತ್ತು ಯಾವುದಾದರೂ ವಸ್ತುವನ್ನು ನೋಡಿ ಧ್ಯಾನ ಮಾಡಬೇಕು ಅಥವಾ ದೂರದ ಯಾವುದಾದರೂ ವಸ್ತುವಿನ ಮೇಲೆ ದೃಷ್ಟಿ ಸ್ಥಿರಗೊಳಿಸಬೇಕು.

ಮಾಡ್ರನ್ ವಿಶ್ವಾಮಿತ್ರ

ಹಣ , ಖ್ಯಾತಿ, ಪ್ರಶಸ್ತಿ , ಪುರಸ್ಕಾರ .. ಈ ಯಾವುದಕ್ಕೂ ಆಸೆಪಡದೆ ಮೂಕ ಪ್ರಾಣಿಗಳ ನೆಮ್ಮದಿಯ ಬದುಕಿಗೆ ಆಸರೆಯಾಗಲಿ ಎಂಬ ಸದಾಶಯದಿಂದ ೧೨೦೦ ಎಕರೆ ವಿಸ್ತಾರದ ಕಾಡು ಸೃಷ್ಟಿಸಿದ ಧೀರ ಭಾರತೀಯನ ಕಥೆ...

 

Thursday 16 August 2012

ಕಲಾಸಂತೆ ಜೊತೆಗೆ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ-೨೦೧೨

ಕಲಾಸಂತೆ ಜೊತೆಗೆ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ-೨೦೧೨ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

 
 ಕಾರ್ಯಕ್ರಮದ ಆಹ್ವಾನ ಪತ್ರಿಕೆ ಈಗಿತ್ತು!
ಕಾರ್ಯಕ್ರಮದ ಕರಪತ್ರ ಹಾಗೂ ಹಿಂಭಾಗದಲ್ಲಿ ಭಾರತದ ಸ್ವತಂತ್ರ್ಯ ದಿನಾಚರಣೆಯ ಬಗ್ಗೆ ಒಂದಿಷ್ಟು ಮಾಹಿತಿ.
 
ಕಲಾವಿದ ಮುನಿರಾಮು ವೇದಿಕೆಯಲ್ಲಿ ದಾನ್ಯಗಳಿಂದ ರಚಿಸಿದ ತ್ರಿವರ್ಣ ಭಾರತ ದೇಶದ ನಕ್ಷೆ ಹೇಗಿದೇ ನೋಡಿ! ಚೆನ್ನಾಗಿದ್ಯಾ.
ವಿಶೇಷ ಏನ್ ಗೊತ್ತಾ! ಅಂಧ ಕಲಾವಿದ ಮಿಮಿಕ್ರಿ ಕಲಾವಿದ ಅಂಧ ಶಿವಕುಮಾರ ಹಾಗೂ ಅವರ ಸ್ನೇಹಿತ ಸುರೇಶ್ ರವರಿಂದ ಕಾರ್ಯಕ್ರಮದ ಉದ್ಘಾಟನೆ ...

Monday 6 February 2012

ಪಿಯುಸಿ ಸಿಇಟಿ ಆನ್‌ಲೈನ್ ಪ್ರಶ್ನೆ ಪತ್ರಿಕೆಗಳು ಲಭ್ಯ

ಪ್ರಸಕ್ತ ವರ್ಷ ಎರಡನೇ ಪಿಯುಸಿ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೂರ್ವತಯಾರಿಗೆ ಅನುಕೂಲವಾಗಲೆಂದು ಆನ್‌ಲೈನ್ ಪ್ರಶ್ನೆ ಪತ್ರಿಕೆಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಪ್ರಶ್ನೆಗಳ ಜೊತೆಗೆ ಉತ್ತರಗಳೂ ದೊರೆಯಲಿವೆ.

ಪರೀಕ್ಷೆ ಸಮಯದಲ್ಲಿ ಸರಿಯಾದ ಪುಸ್ತಕಗಳು ದಕ್ಕದೆ ವಿದ್ಯಾರ್ಥಿಗಳು ದಿಕ್ಕೆಡದಿರಲೆಂದು ಈ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು, ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರಶ್ನೆ ಪತ್ರಿಕೆಗಳು ಶಿಕ್ಷಣ ಇಲಾಖೆ ಮತ್ತು ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯ.

ಈ ಮಾದರಿ ಪ್ರಶ್ನೆಪತ್ರಿಕೆಗಳ ಜೊತೆಗೆ ಹಿಂದಿನ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳು ಉತ್ತರಗಳ ಸಮೇತ ಅಂತರ್ಜಾಲ ತಾಣದಲ್ಲಿ ಸಿಗಲಿವೆ ಎಂದು ಪದವಿಪೂರ್ಣ ಶಿಕ್ಷಣ ಇಲಾಖೆಯ ನಿರ್ದೇಶಕಿ ರಶ್ಮಿ ವಿ ಅವರು ತಿಳಿಸಿದ್ದಾರೆ. pue.kar.nic.inನಲ್ಲಿ ಪ್ರಶ್ನೆಗಳಿಗಾಗಿ ವಿದ್ಯಾರ್ಥಿಗಳು ಜಾಲಾಡಬಹುದು.

Monday 23 January 2012

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?

ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಕೊರತೆ ಅವರ ಶಿಕ್ಷಣ ಮತ್ತು ವೈಯ್ಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಜ್ಞಾಪಕ ಶಕ್ತಿಯ ಕೊರತೆ ಮಕ್ಕಳ ಆತ್ಮವಿಶ್ವಾಸವನ್ನೂ ಕುಂಠಿತಗೊಳಿಸುತ್ತದೆ. ಆದರೆ ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಕೆಲವು ನೈಸರ್ಗಿಕ ವಿಧಾನವನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ.

ಜ್ಞಾಪಕ ಶಕ್ತಿ ಹೆಚ್ಚಿಸುವ ವಿಧಾನ:
* ಮೆಂತ್ಯೆ ಸೊಪ್ಪು, ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗೂ ಸೇವಿಸಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ಸೇವಿಸಬಹುದು.
* ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆ ರುಚಿ ಹೆಚ್ಚುವುದರ ಜೊತೆ ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
* ಸೇಬನ್ನು ಪ್ರತಿದಿನ ಊಟವಾದ ನಂತರ ನಿರಂತರವಾಗಿ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
* ನಲ್ಲಿಕಾಯನ್ನು ತಿನ್ನುತ್ತಿದ್ದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.
* ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುದಿಸಿ ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.