Thursday 19 May 2011

ಈ ಲೋಕೇಶನಿಗೆ ನ್ಯಾಯ ಕೊಡಿಸುವಿರಾ ಮಂತ್ರಿ ಮಹೋದಯರೇ?





ಇದು ಒಬ್ಬ ಲೋಕೇಶನ ಕಥೆಯಲ್ಲ. ಇಂಥ ಲಕ್ಷಾಂತರ ಲೋಕೇಶ್‌ಗಳು ಕರ್ನಾಟಕದಾದ್ಯಂತ ಇದ್ದಾರೆ. ಸದ್ಯಕ್ಕೆ ಕುರ್ಚಿ ಉಳಿಸಿಕೊಳ್ಳುವ ಕಾರ್ಯದಲ್ಲಿ ಬಿಜಿಯಾಗಿರುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಸರ್ಕಾರ ಕೆಡವಲು ತುದಿಗಾಲಲ್ಲಿ ನಿಂತಿರುವ ವಿರೋಧಪಕ್ಷದ ನಾಯಕರುಗಳು ಕನಿಷ್ಠ ಈ ಒಬ್ಬ ಲೋಕೇಶನಿಗಾದರೂ ನ್ಯಾಯ ದೊರಕಿಸಿಕೊಡುವರೆ? ಮಾಸ್ಟರ್ ಕಿಶನ್‌ಗಾಗಿ ನಿಯಮಗಳನ್ನು ಸಡಿಲಿಸಬಲ್ಲವರು, ಈ ಅಸಹಾಯಕ ಜನರಿಗೆ ಜಾತಿ ಸರ್ಟಿಫಿಕೇಟ್, ಇತ್ಯಾದಿಗಳಿಗಾಗಿ ಪೀಡಿಸುವುದನ್ನು ನಿಲ್ಲಿಸುತ್ತಾರಾ? ಇದ್ಯಾವುದೂ ಸಾಧ್ಯವಾಗದಿದ್ದರೆ ಬಡವರಿಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲ ಎಂದು ಘೋಷಿಸುವ ಮೂಲಕ ಕಠೋರವಾಸ್ತವವನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿದ್ದಾರೆಯೇ?

ನಮ್ಮ ಮೀಡಿಯಾಗಳಲ್ಲಿ ನಿಜವಾಗಿಯೂ ಪ್ರಧಾನ ಆದ್ಯತೆಯ ವರದಿಯಾಗಬೇಕಿದ್ದ ಇದು ಯೂ ಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ಈ ಮನಕಲಕುವ ಕಿರುಚಿತ್ರ ನಿರ್ಮಿಸಿದವರಿಗೆ ಒಂದು ಥ್ಯಾಂಕ್ಸ್. ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ. ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

ನಮ್ಮ ಇ ಮೇಲ್ ವಿಳಾಸ : sampadakeeya@gmail.com


No comments:

Post a Comment