Friday 4 November 2011

ಮಕ್ಕಳ ಭಯವನ್ನು ಹೇಗೆ ತೆಗೆಯಬೇಕು ?

ಭೀತಿ : "ಭಯದಿಂದಾಗಿ ಮನುಷ್ಯನು ಗಂಡಾಂತರದ ಪ್ರಸಂಗದಿಂದ ದೂರ ಓಡುತ್ತಾನೆ. ಬೆಂಕಿ ಅಥವಾ ಗೂಂಡಾಗಳಿಂದ ಅವನು ದೂರ ಓಡುತ್ತಾನೆ, ಆ ಸಮಯದಲ್ಲಿ ಅವನ ಭಯವು ಯೋಗ್ಯವಾಗಿರುತ್ತದೆ, ಆದರೆ ಕಾಲ್ಪನಿಕ ಕತೆಗಳು, ಅದರಂತೆಯೇ ಕತ್ತಲೆ, ಜಿರಲೆ ಇತ್ಯಾದಿ ವಿಷಯಗಳ ಭಯವು ಅಯೋಗ್ಯವಾಗಿರುತ್ತದೆ. ಭಯವನ್ನು ಹೋಗಲಾಡಿಸಲು ಉಪಾಯ ಯೋಜನೆಯನ್ನು ಮಾಡಲಾಗುತ್ತದೆ.
ಭಯವನ್ನು ಹೇಗೆ ಹೋಗಲಾಡಿಸಬೇಕು ?
೧. ರಾತ್ರಿಯ ವೇಳೆಯಲ್ಲಿ ಕತ್ತಲೆಯಿಂದಾಗಿ ಮಗುವು ಮೂತ್ರವಿಸರ್ಜನೆಗೆ ಹೋಗಲು ಭಯಪಡುತ್ತಿರುವುದಾದರೆ, ಅಲ್ಲಿ ದೀಪವನ್ನು ಉರಿಸಿರಬೇಕು.
೨. ಅನೇಕ ವೇಳೆ ಗಮನಕ್ಕೆ ಬರುವುದೆಂದರೆ, ಹಾರುವ ಜಿರಲೆಯು ಕೋಣೆಯಲ್ಲಿ ಕಂಡುಬಂದರೆ ತಾಯಿಯೇ ಗಾಬರಿಯಾಗಿ ಅಂಜಿಕೆಯಿಂದ ಹಾರುತ್ತಾಳೆ. ಅಂತಹ ತಾಯಿಯ ಮಕ್ಕಳು ಸಹಜವಾಗಿ ಜಿರಲೆಗಳಿಗೆ ಹೆದರುತ್ತಾರೆ. ಆದುದರಿಂದ ಮಕ್ಕಳೆದುರು ತಾಯಿಯು ಅಂಜದೇ ಸ್ಥಿರವಾಗಿರಬೇಕು.
೩. ಭಯವು ಗಂಡಾಂತರಕಾರಿ ಪ್ರಸಂಗದಿಂದ ನಿರ್ಮಾಣವಾದರೆ ಅಂತಹ ಪ್ರಸಂಗಗಳನ್ನು ತಪ್ಪಿಸಲು ಪ್ರಯತ್ನಿಸಬೇಕು.
ಉದಾ. ಒಂದುವೇಳೆ ರೌಡಿಯು ಶಾಲೆಯ ದಾರಿಯಲ್ಲಿ ತೊಂದರೆಯನ್ನು ಕೊಡುತ್ತಿದ್ದಲ್ಲಿ, ಶಾಲೆಯ ಮಾರ್ಗವನ್ನು ತಪ್ಪಿಸುವುದು ಅವಶ್ಯವಿರುತ್ತದೆ.
೪. ಯಾವುದಾದರೊಂದು ಪ್ರಸಂಗವನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದಲ್ಲಿ, ಉದಾ. ಒಬ್ಬ ವ್ಯಕ್ತಿಗೆ ಅಸಾಧ್ಯ ರೋಗವಾಗಿದ್ದಲ್ಲಿ, ಅವನು ತತ್ತ್ವಜ್ಞಾನದ ಅಭ್ಯಾಸವನ್ನು ಮಾಡಬೇಕು. "ಪ್ರತಿಯೊಂದು ರೋಗವು ನಾವೇ ಹಿಂದೆ ಮಾಡಿದ ಪಾಪಕರ್ಮದ ಫಲವೆಂದು  ನಾವು ಭೋಗಿಸುತ್ತಿದ್ದೇವೆ", ಎಂದು ನಿಶ್ಚಯವಾದ ಮೇಲೆ ನಮ್ಮ ಪಾಪದಿಂದ ಮುಕ್ತರಾಗಲು ಆ ರೋಗವನ್ನು ಆನಂದದಿಂದ ಸ್ವೀಕಾರ ಮಾಡಬಹುದು.
೫. "ದೇಹ ನಶ್ವರವಾಗಿರುವುದರಿಂದ ಮೃತ್ಯುವನ್ನು ಯಾರಿಗೂ ತಪ್ಪಿಸಲಾಗುವುದಿಲ್ಲ ಮತ್ತು ಪ್ರತಿಯೊಬ್ಬನ ಆತ್ಮವು ಅಮರವಾಗಿರುವುದರಿಂದ ಮೃತ್ಯುವಿನ ವಿಷಯದಲ್ಲಿ ಭಯ ಪಟ್ಟುಕೊಳ್ಳುವ ಕಾರಣವೇ ಇಲ್ಲ", ಎಂದೂ ಸಹ ಮನಸ್ಸಿನ ಮೇಲೆ ಬಿಂಬಿಸಬೇಕು.
ಶರೀರದಿಂದ ಮತ್ತು ಮನಸ್ಸಿನಿಂದ ದುರ್ಬಲವಾಗಿರುವ ಜನರೇ ಪುಕ್ಕಲುಗಳಿರುತ್ತಾರೆ. "ಹೆದರುವವನ ಹಿಂದೆ ಬ್ರಹ್ಮರಾಕ್ಷಸ" ಎಂಬ ಗಾದೆಯು ಎಲ್ಲರಿಗೂ ತಿಳಿದೇ ಇದೆ. ಭಗತಸಿಂಗ, ಸ್ವಾತಂತ್ರ ವೀರ ಸಾವರಕರ ಮುಂತಾದ ದೇಶಭಕ್ತರು ನಿರ್ದಾಕ್ಷಿಣ್ಯವಾಗಿ ಮತ್ತು ಮೃತ್ಯುವಿಗೆ ಹೆದರದೇ ಕ್ರೂರ ಬ್ರಿಟಿಷ ಸರಕಾರದ ವಿರುದ್ಧ ಎದ್ದು ನಿಂತರು. ಅವರ ತ್ಯಾಗದ ಫಲವನ್ನು ಇಂದು ನಾವು ಉಪಭೋಗಿಸುತ್ತಿದ್ದೇವೆ.
ಉಪನಿಷತ್ತಿನಲ್ಲಿ ಹೇಳಿದಂತೆ, "ಬೇರೆಯವರೊಂದಿಗೆ ನಮ್ಮ ಸಂಪರ್ಕ ಬಂದ ನಂತರ ಅವನು ನಮಗೆ ಮೋಸಗೊಳಿಸಬಹುದೋ ಹೇಗೆ, ಎಂಬ ಭಯವು ನಮಗೆ ಸತತವಾಗಿ ಇದ್ದೇ ಇರುತ್ತದೆ. ಆದುದರಿಂದಲೇ ಸಾಧುಸಂತರು ಹೇಳಿದಂತೆ ಸಮದೃಷ್ಟಿಯಾದ ನಂತರ, ಎಂದರೆ "ಎಲ್ಲೆಡೆಯಲ್ಲಿಯೂ ನಾನು ನೀನೆಂಬ ಭೇದವಿಲ್ಲ",ಎಂಬ ಅವಸ್ಥೆಯು ಪ್ರಾಪ್ತವಾದ ನಂತರ ತನ್ನಷ್ಟಕ್ಕೆ ತಾನೇ ಭಯದ ಲವಲೇಶವೂ ಇರುವುದಿಲ್ಲ."
- ಡಾ.ವಸಂತ ಬಾಳಾಜಿ ಆಠವಲೆ, ಚಿಕ್ಕಮಕ್ಕಳ ತಜ್ಞರು (ಕ್ರಿ.ಶ.೧೯೯೦)

No comments:

Post a Comment