Thursday 18 August 2011

ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್


ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಜುಲೈ ೨೫, ೨೦೦೨ ರಿಂದ ಜುಲೈ ೨೫ ೨೦೦೭ ರ ತನಕ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ಜುಲೈ ೨೫, ೨೦೦೨ ರಂದು ಅಧಿಕಾರ ಸ್ವೀಕರಿಸಿದರು.  
ರಾಮೇಶ್ವರಂನ ಧನುಷ್ಕೋಡಿಯಿಂದ, ರಾಜಧಾನಿ ದೆಹಲಿಯವರೆಗಿನ ಯಾತ್ರೆ, ಅವಿಸ್ಮರಣೀಯ. ರಾಷ್ಟ್ರಪತಿ-ಹುದ್ದೆ ಡಾ. ಕಲಾಂರವರನ್ನು, ಅರಸಿ ಬಂತು.
ಇವರ ಜನನ ಅಕ್ಟೋಬರ್ ೧೫,೧೯೩೧ ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಯಲ್ಲಿ ಆಯಿತು. ೧೯೫೮ರಲ್ಲಿ ಮದ್ರಾಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ಏರೋನಾಟಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿಯನ್ನು ಪಡೆದರು. ಹಾಗೆಯ ಪಿ.ಎಚ್.ಡಿ.,ಎಮ್ ಟೆಕ್.ಪದವಿಯನ್ನು ಪಡೆದಿದ್ದಾರೆ.ಡಿಆರ್‍ಡಿಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗು ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು. ದಿ ಗ್ರೆಟ್ ಮ್ಯಾನ್ .

ಡಾ. ಕಲಾಂ ರಚಿಸಿದ ಕೆಳಗಿನ ಪುಸ್ತಕಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಗಳಾಗಿವೆ :

೧, * Wings of Fire (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು): ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.

೨. * India 2020 : ಈ ಪುಸ್ತಕದಲ್ಲಿ ಕಲಾಮ್ ರವರು ೨೦೨೦ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ.

" ಕಲಾಂ ಮೇಷ್ಟ್ರು ", ವಿಶೇಷ ಕಾಳಜಿವಹಿಸಿ, ಭಾರತದ ಮಕ್ಕಳಿಗಾಗಿಯೇ ರಚಿಸಿದ ಬಹುಮೂಲ್ಯ ಕೃತಿ.

ಕನ್ನಡ ಪುಸ್ತಕ ಪ್ರಾಧಿಕಾರಗಳೂರು, ಭಾರತದೇಶದ ಮಕ್ಕಳಿಗಾಗಿಯೇ ರಚಿಸಿದ, ಒಂದು ಅಪರೂಪದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದನ್ನು ರಚಿಸಿದವರು. ಪ್ರೊ. ಎಚ್. ಆರ್. ರಾಮಕೄಷ್ಣರಾಯರು. : ISBN : 81-7713-199-0. ಇದರ ೧,೦೦೦ ಪ್ರತಿಗಳು ಮಾರಾಟವಾಗಿವೆ.

ಜನ್ಮ ದಿನಾಂಕ: ಅಕ್ಟೋಬರ್ ೧೫ ೧೯೩೧
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ: ೧೧ನೆ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ: ೨೫ ಜುಲೈ ೨೦೦೨
ಅಧಿಕಾರ ತ್ಯಜಿಸಿದ ದಿನಾಂಕ: ೨೫ ಜುಲೈ ೨೦೦೭
ಪೂರ್ವಾಧಿಕಾರಿ: ಕೆ.ಆರ್. ನಾರಾಯಣನ್
ಉತ್ತರಾಧಿಕಾರಿ: ಪ್ರತಿಭಾ ಪಾಟೀಲ್

 


No comments:

Post a Comment