Sunday 21 August 2011

ಮಕ್ಕಳಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಅಭಿಮಾನವನ್ನು ಹೇಗೆ ನಿರ್ಮಾಣ ಮಾಡುವಿರಿ ?

ಸದ್ಯದ ಸ್ಥಿತಿ
ನಾವು ಸದ್ಯ ಮಕ್ಕಳ ಅವಲೋಕನವನ್ನು ಮಾಡಿದಾಗ ಗಮನಕ್ಕೆ ಬರುವುದೆಂದರೆ, ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನದ ಅಭಾವವು ದೊಡ್ಡ ಪ್ರಮಾಣದಲ್ಲಿ ಅರಿವಿಗೆ ಬರುತ್ತದೆ. ಒಂದು ವೇಳೆ ಈ ಸ್ಥಿತಿಯು ಹೀಗೆಯೇ ಉಳಿದರೆ, ರಾಷ್ಟ್ರದ ವಿನಾಶವಾಗಲು ಸಮಯ ತಗಲಲಾರದು. ಆದುದರಿಂದ ನಾವು ಮಕ್ಕಳಲ್ಲಿ ರಾಷ್ಟ್ರಾಭಿಮಾನ ನಿರ್ಮಾಣವಾಗುವ ಸಲುವಾಗಿ ಪ್ರಯತ್ನ ಮಾಡಲೇಬೇಕು.

ರಾಷ್ಟ್ರದಲ್ಲಿನ ನಾಗರಿಕರ ಒಮ್ಮತ ಹಾಗೂ ಸಂಘಟಿತತೆಯಿಂದಾಗಿ ರಾಷ್ಟ್ರದ ಅಖಂಡತ್ವವು ಸ್ಥಿರವಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳೇ ನಾಳೆಯ ಭಾರತದ ಭಾವೀ ನಾಗರಿಕರಾಗಿರುತ್ತಾರೆ. ಆದುದರಿಂದ ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿಂದಲೇ ಪ್ರಖರ ರಾಷ್ಟ್ರಾಭಿಮಾನವನ್ನು ನಿರ್ಮಾಣ ಮಾಡುವುದು ಅತ್ಯಂತ ಆವಶ್ಯಕವಾಗಿರುತ್ತದೆ. ಅನ್ಯಥಾ ದೊಡ್ಡವರಾದ ಮೇಲೆ ಸಮಾಜಕ್ಕಾಗಿ ಎಂದರೆ ಪರ್ಯಾಯವಾಗಿ ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ವೃತ್ತಿಯು ಅವರಲ್ಲಿ ನಿರ್ಮಾಣವಾಗಲು ಸಾಧ್ಯವಿಲ್ಲ. ಇಸ್ರೇಲಿನ ಎಷ್ಟೊಂದು ಪೀಳಿಗೆಯ ನಂತರವೂ ಸಹ ಜಗತ್ತಿನಾದ್ಯಂತ ಪಸರಿಸಿದ ನಾಗರಿಕರು ಒಂದೆಡೆ ಬರಲು ಸಾಧ್ಯವಾಯಿತು, ಅದರ ಹಿಂದೆ ಮುಂದಿನ ಪೀಳಿಗೆಯಲ್ಲಿ ಅವರು ನಿರ್ಮಾಣ ಮಾಡಿದ ಪ್ರಖರ ರಾಷ್ಟ್ರವಾದವೇ ಕಾರಣವಾಗಿದೆ.

ಮಕ್ಕಳಿಗೆ ಯೋಗ್ಯ ದೃಷ್ಟಿಕೋನವನ್ನು ನೀಡುವುದು (ಮಾನಸಿಕ/ಬೌದ್ಧಿಕ ಸ್ತರ)
೧. ಇತಿಹಾಸ ಈ ವಿಷಯವನ್ನು ರಾಷ್ಟ್ರಪ್ರೇಮ ನಿರ್ಮಾಣವಾಗಲು ಕಲಿಸುವುದು ಆವಶ್ಯಕವಾಗಿರುವುದು

ನಿಜವಾಗಿ ಹೇಳಬೇಕೆಂದರೆ ಇತಿಹಾಸ ವಿಷಯವನ್ನು ಕಲಿತು ಮಕ್ಕಳಲ್ಲಿ ರಾಷ್ಟ್ರಾಭಿಮಾನವು ನಿರ್ಮಾಣವಾಗಬೇಕಿತ್ತು, ಆದರೆ ನಮ್ಮ ಶಿಕ್ಷಣವು ಅಂಕಾಧಿಷ್ಠಿತವಾಗಿದೆ. ಪರೀಕ್ಷೆಗಳ ಮೌಲ್ಯಮಾಪನವನ್ನು ಅಂಕಗಳ ಮೇಲೆ ಮಾಡಲಾಗುತ್ತದೆ. ಅದರಿಂದಾಗಿ ಮಕ್ಕಳ ಗಮನವು ಅಂಕಗಳನ್ನು ಹೆಚ್ಚಿಸಿಕೊಳ್ಳುವತ್ತ ಇರುತ್ತದೆ. ಸದ್ಯ ಮಕ್ಕಳು ಎಲ್ಲ ವಿಷಯಗಳಂತೆ "ಇತಿಹಾಸ" ಈ ವಿಷಯವನ್ನು ಅಂಕಗಳಿಗಾಗಿ ಕಲಿಯುತ್ತಾರೆ, ಉದಾ. ಭಗತಸಿಂಗ ಈ ವಿಷಯವು ಹತ್ತು ಅಂಕಗಳಿಗಾಗಿ. ಮಕ್ಕಳ ಇದರ ಹಿಂದಿನ ದೃಷ್ಟಿಕೋನವನ್ನು ನಾವೇ ಬದಲಾಯಿಸಬೇಕು. ಇತಿಹಾಸವನ್ನು ಅಂಕಗಳಿಗಾಗಿ ಕಲಿಯದೇ ಅದು ಅವರಲ್ಲಿ ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡಬೇಕು, ಎನ್ನುವ ರೀತಿಯಲ್ಲಿ ಅವರಿಗೆ ಕಲಿಸಬೇಕು ಹಾಗೂ ಇದೇ ದೃಷ್ಟಿಕೋನವನ್ನು ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಕೊಡಬೇಕು. ಒಂದು ವೇಳೆ ಭಾವೀ ಪೀಳಿಗೆಯು ರಾಷ್ಟ್ರಪ್ರೇಮಿಯಾಗದಿದ್ದಲ್ಲಿ, ರಾಷ್ಟ್ರದ, ಪರೋಕ್ಷವಾಗಿ ನಮ್ಮ ವಿನಾಶವು ಖಚಿತವಾಗಿದೆ. "ರಾಷ್ಟ್ರ ಉಳಿದರೆ ಸಮಾಜ ಉಳಿದೀತು ಮತ್ತು ಸಮಾಜ ಉಳಿದರೆ ನಾನು ಉಳಿಯುವೆನು", ಎನ್ನುವ ದೃಷ್ಟಿಕೋನವನ್ನೇ ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಬಿಂಬಿಸಬೇಕು.

೨. ಇತಿಹಾಸದಲ್ಲಿನ ಚಿಕ್ಕ ಚಿಕ್ಕ ಉದಾಹರಣೆಗಳನ್ನು ನೀಡಿ ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡಿರಿ!
ಇತಿಹಾಸದಲ್ಲಿನ ಪ್ರಸಂಗಗಳನ್ನು ಕಲಿಸುವಾಗ ಮಕ್ಕಳಲ್ಲಿ ರಾಷ್ಟ್ರಪ್ರೇಮವು ನಿರ್ಮಾಣವಾಗುತ್ತದೆಯೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಮಕ್ಕಳ ವರದಿಯನ್ನು ತೆಗೆದುಕೊಳ್ಳಬೇಕು, ಉದಾ. "ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣದ ಆಹುತಿಯನ್ನು ನೀಡಿದರು. ಅಂತಹ ಸಂದರ್ಭದಲ್ಲಿ ಧ್ವಜವು ಸ್ವಾತಂತ್ರ್ಯದಿನದಂದು ರಸ್ತೆಯ ಮೇಲೆ ಬಿದ್ದಿರುವುದು ಕಂಡಾಗ ನಿನಗೆ ಏನೆನ್ನಿಸುವುದು ?" ಎನ್ನುವಂತಹ ಕೃತಿಯ ಸ್ತರದಲ್ಲಿನ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಬೇಕು. ಇದರ ಮೂಲಕ "ಧ್ವಜದ ಅಪಮಾನವನ್ನು ತಡೆಯಬೇಕು", ಎನ್ನುವುದನ್ನು ನಾವು ಮಕ್ಕಳಿಗೆ ಹೇಳಬೇಕು. ರಾಷ್ಟ್ರಪ್ರೇಮವನ್ನು ನಿರ್ಮಾಣ ಮಾಡುವಂತಹ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಬೇಕು.

೩. ರಾಷ್ಟ್ರಕ್ಕಾಗಿ ಬಲಿದಾನವನ್ನು ನೀಡಿದವರ ಬಗ್ಗೆ ಕೃತಜ್ಞತಾಭಾವವನ್ನು ನಿರ್ಮಾಣ ಮಾಡಿರಿ!
ಸ್ವಾತಂತ್ರ್ಯಕ್ಕಾಗಿ ಸಂಪೂರ್ಣ ಆಯುಷ್ಯವನ್ನು ಬಲಿಕೊಟ್ಟ, ಕಾರಾಗೃಹದಲ್ಲಿ ಅತಿಶಯ ಕಷ್ಟಗಳನ್ನು ಭೋಗಿಸುವ ಸ್ವಾತಂತ್ರ್ಯಸೈನಿಕರು ಮತ್ತು ಕ್ರಾಂತಿಕಾರರು ಹಾಗೆಯೇ ಇಂದಿಗೂ ದೇಶದ ಸೀಮೆಯ ರಕ್ಷಣೆಯನ್ನು ಮಾಡುವುದಕ್ಕಾಗಿ ಪೂರ್ಣ ಆಯುಷ್ಯವನ್ನು ಪಣಕ್ಕೊಡ್ಡಿದ ಸೈನಿಕರ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಆದರದ ಹಾಗೂ ಕೃತಜ್ಞತೆಯ ಭಾವವನ್ನು ನಿರ್ಮಾಣ ಮಾಡುವುದು ಆವಶ್ಯಕವಾಗಿದೆ.

೪. ರಾಷ್ಟ್ರಕ್ಕಾಗಿ ತ್ಯಾಗವನ್ನು ಮಾಡುವುದಕ್ಕೆ ತಯಾರಿಯು ಧಾರ್ಮಿಕ ಅಧಿಷ್ಠಾನದಿಂದಲೇ ಸಾಧ್ಯವಾಗುತ್ತದೆ!
ವೈಯಕ್ತಿಕ ಸುಖಕ್ಕಿಂತ ರಾಷ್ಟ್ರಕ್ಕಾಗಿ ತ್ಯಾಗ ಮಾಡುವುದೇ ಅಧಿಕ ಯೋಗ್ಯ ವಿಷಯವಾಗಿದೆ, ಎನ್ನುವ ಸಂಕಲ್ಪನೆಯು ಮಕ್ಕಳ ಮನಸ್ಸಿನಲ್ಲಿ ಬಿಂಬಿತವಾಗುವುದು ಆವಶ್ಯಕವಾಗಿದೆ. "ತ್ಯಾಗ" ಈ ವಿಷಯವು ಕೈಗೂಡುವುದಕ್ಕಾಗಿ ಕೇವಲ ರಾಷ್ಟ್ರಪ್ರೇಮವು ಸಾಕಾಗುವುದಿಲ್ಲ. ಅದರಿಂದಾಗಿ ಸ್ವಾರ್ಥ ಮತ್ತು ಅಹಂಭಾವವು ಬೆಳೆಯುವ ಸಾಧ್ಯತೆಯಿರುತ್ತದೆ. ಆದರೆ ಧರ್ಮದ ಅಧಿಷ್ಠಾನವಿದ್ದರೆ, ನಿಸ್ವಾರ್ಥತೆ ಮತ್ತು ತ್ಯಾಗದ ಭಾವನೆಯು ನಿರ್ಮಾಣವಾಗಲು ಸಾಧ್ಯವಾಗುವುದು. ಇದಕ್ಕಾಗಿ ನಿಜವಾದ ರಾಷ್ಟ್ರಪ್ರೇಮವು ನಿರ್ಮಾಣವಾಗುವುದಕ್ಕಾಗಿ ಧರ್ಮದ ಅಧಿಷ್ಠಾನವಿರುವುದು ಆವಶ್ಯಕವಾಗಿದೆ.


No comments:

Post a Comment