Sunday 21 August 2011

ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ?




ಶಿಸ್ತು ಮತ್ತು ಶಿಕ್ಷೆ ಈ ಎರಡೂ ಶಬ್ದಗಳು ಶಿಕ್ಷಣ ಶಬ್ದದಿಂದ ನಿರ್ಮಾಣವಾಗಿವೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಜಾರಿಯಲ್ಲಿ ತರುವುದೇ ಶಿಸ್ತು. ಇದಕ್ಕಾಗಿ ಶಿಕ್ಷೆ ಯಾತಕ್ಕಾಗಿ, ಯಾವ ತಪ್ಪಿಗಾಗಿ ಹಾಗೂ ಯಾವ ತಪ್ಪು ವರ್ತನೆಗಾಗಿ ಇದೆ, ಎನ್ನುವುದನ್ನು ತಿಳಿಸಿಯೇ ಶಿಕ್ಷೆಯನ್ನು ನೀಡಬೇಕು.
ಶಿಸ್ತನ್ನು ಕಲಿಸುವ ಸಂದರ್ಭದಲ್ಲಿ ಮಹತ್ವದ ಸೂಚನೆಗಳು
೧. ಒಳ್ಳೆಯ ವರ್ತನೆಯ ಸ್ತುತಿ ಮತ್ತು ತಪ್ಪುವರ್ತನೆಗೆ ಶಿಕ್ಷೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ಅಥವಾ ಬಹುಮಾನ ಸಿಕ್ಕಿದರೆ ಅದರ ಸ್ತುತಿಯನ್ನು ಮಾಡಬೇಕು. ಅವರ ಪ್ರಶಂಸೆಯನ್ನು ಮಾಡಬೇಕು ಎಂದರೆ ಅವರಿಗೆ ಇನ್ನೂ ಒಳ್ಳೆಯದಾಗಿ ವರ್ತಿಸುವುದಕ್ಕೆ ಪ್ರೋತ್ಸಾಹನೆಯು ಸಿಗುವುದು. ಅವರ ತಪ್ಪುನಡವಳಿಕೆಗೆ ಕೋಪವನ್ನು ವ್ಯಕ್ತ ಮಾಡಬೇಕು ಮತ್ತು ಅವಶ್ಯವೆನಿಸಿದಲ್ಲಿ ಶಿಕ್ಷೆಯನ್ನೂ ನೀಡಬೇಕು.
೨. ಆಜ್ಞೆಯನ್ನು ಮಾಡದೇ ವಿನಂತಿಯನ್ನು ಮಾಡಬೇಕು. "ನೀರನ್ನು ತಾ", ಎಂದು ಹೇಳದೇ "ರಾಜಾ ನನಗೊಂದು ಗ್ಲಾಸು ನೀರನ್ನು ತಂದುಕೊಡಬಹುದಾ ?", ಎಂದು ವಿನಂತಿಯನ್ನು ಮಾಡಬೇಕು.
೩. ಮನೆಯಲ್ಲಿನ ಸದಸ್ಯರ ಒಮ್ಮತ-ಮಗುವಿಗೆ ಶಿಸ್ತನ್ನು ಹಚ್ಚುವ ಮೊದಲು ಮಗುವಿನಿಂದ ಯಾವ ರೀತಿಯ ನಡವಳಿಕೆಯ ಅಪೇಕ್ಷೆಯಿದೆಯೆನ್ನುವುದರ ವಿಚಾರವನ್ನು ಮಾಡಿ ನಮ್ಮ ಭೂಮಿಕೆಯನ್ನು ನಿಶ್ಚಿತಗೊಳಿಸಬೇಕು ಮತ್ತು ಎರಡು ಮತಗಳಾಗಲು ಬಿಡಬಾರದು. ತಾಯಿ-ತಂದೆಯ ಹಾಗೂ ಮನೆಯಲ್ಲಿನ ಇತರ ಸದಸ್ಯರ ಒಮ್ಮತವು ಮಗುವಿಗೆ ಶಿಸ್ತನ್ನು ಕಲಿಸುವ ಕಾರ್ಯದಲ್ಲಿ ಅತ್ಯಂತ ಆವಶ್ಯಕವಾಗಿರುತ್ತದೆ. ಕಿಟಕಿಯ ಗಾಜನ್ನು ಹಿಡಿದು ಕಿಟಕಿಯ ಮೇಲೆ ಎತ್ತರಕ್ಕೆ ಏರುವ ಬಗ್ಗೆ ತಂದೆಯ ಪ್ರಶಂಸೆ ಮತ್ತು ಅದೇ ಕೃತ್ಯಕ್ಕಾಗಿ ತಾಯಿಯು ಕೋಪಗೊಳ್ಳುವುದು, ಹೀಗೆ ಆಗಬಾರದು. ಶಿಕ್ಷೆಯನ್ನು ಯಾವಾಗ ಕೊಡಬೇಕು ಎನ್ನುವುದರ ಬಗ್ಗೆ ಮತಭೇದವನ್ನು ಪಾಲಕರು ಮೊದಲೇ ದೂರಗೊಳಿಸಿಕೊಂಡಿರಬೇಕು. ಮಕ್ಕಳೆದುರು ಬಿಡಿಸಬಾರದು.
೪. ತಪ್ಪು ಘಟಿಸಿದಲ್ಲಿ ತಕ್ಷಣ ಶಿಕ್ಷೆಯನ್ನು ಕೊಡಬೇಕು. "ಇರು, ಸಂಜೆಗೆ ತಂದೆಯು ಬರಲಿ, ನಂತರ ನೋಡುತ್ತೇನೆ" ಎನ್ನುವುದು ತಪ್ಪು ಶಿಕ್ಷೆಯಾಗಿದೆ. ಅದರಿಂದಾಗಿ ತಂದೆಯು ಬರುವವರೆಗೆ ಮಗುವು ಶಿಕ್ಷೆಯ ಚಿಂತೆಯಲ್ಲಿರುತ್ತದೆ.
ಮಗುವು ಮಾಡಿದ ತಪ್ಪಿಗೆ ತುಲನೆಯಲ್ಲಿ ಶಿಕ್ಷೆಯು ಹೊಂದಾಣಿಕೆಯಾಗುವಂತಿರಬೇಕು. ನಮ್ಮ ಶಾಲೆಯ ಪ್ರಾಚಾರ್ಯ ಹಾಗೂ ಗುರುವರ್ಯರು ಅತಿಶಯ ಸಾತ್ತ್ವಿಕ ಮತ್ತು ಶಾಂತ ಗೃಹಸ್ಥರು. ಅವರ ಬಳಿ ಯಾವುದೇ ವಿದ್ಯಾರ್ಥಿಯು ಭಯದಿಂದ ಹೋಗದೇ ಆದರದಿಂದ ಮತ್ತು ಪ್ರೇಮದಿಂದ ಹೋಗುತ್ತಿದ್ದನು. ಒಂದು ದಿನ ನಾನು ಅವರಿಗೆ ಭೇಟಿಯಾಗಲು ಹೋದಾಗ ಒಬ್ಬ ೧೦ ನೇ ತರಗತಿಯ ಹುಡುಗನಿಗೆ ಛಡಿಯಿಂದ (ಕೋಲಿನಿಂದ) ಬಹಳ ಹೊಡೆಯುತ್ತಿದ್ದರು. ಕಾಳೆ ಗುರೂಜಿಯವರ ರೌದ್ರಾವತಾರವನ್ನು ನೋಡಿ ನಾನೇ ಬೆಚ್ಚಿಬಿದ್ದೆ. ನಂತರ ಅವರನ್ನು ಭೇಟಿಯಾದಾಗ ಅವರು ಹೇಳಿದರು, "ನಿನ್ನೆ ಈ ವಿದ್ಯಾರ್ಥಿಯು ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ನನ್ನ ಬಳಿಯಿಂದ ೫೦ ರೂಪಾಯಿಗಳನ್ನು ತೆಗೆದುಕೊಂಡು ಹೋದನು. ನಾನು ಅವನಿಗೆ ನೀಡಿದೆ. ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಅವನ ತಾಯಿಯು ಸಿಕ್ಕಳು. ಈ ಹುಡುಗನಿಗೆ ಜನ್ಮವಿಡೀ ನೆನಪಿನಲ್ಲಿರಬೇಕು ಅಂತಹ ಶಿಕ್ಷೆಯೇ ಯೋಗ್ಯವಾಗಿದೆ. ಇಲ್ಲವಾದರೆ ಅವನು ಪಕ್ಕಾ ಮೋಸಗಾರನಾಗುತ್ತಿದ್ದ.
ಯೋಗ್ಯ ಮತ್ತು ಅಯೋಗ್ಯ ಶಿಕ್ಷೆ
ಮಗುವಿನೊಂದಿಗೆ ಮಾತನಾಡದಿರುವುದು ಅಥವಾ ಮಗುವಿಗೆ ದಿನವಿಡೀ ಉಪವಾಸ, ಈ ಶಿಕ್ಷೆಗಳು ಯೋಗ್ಯವಾದುವಲ್ಲ. ಕಾರಣ ಸಂಜೆಯ ವೇಳೆಗೆ ಅದೇ ತಾಯಿಯು ಊಟಕ್ಕಾಗಿ ಮಗುವಿಗೆ ಮನವೊಲಿಸುವಳು. ಸಂಜೆಯ ವೇಳೆಗೆ ಮಗುವಿಗೆ ಆಟಕ್ಕಾಗಿ ಮನೆಯ ಹೊರಗೆ ಹೋಗಗೊಡದಿರುವುದು ಅಥವಾ ಅವನಿಗೆ ದೂರಚಿತ್ರವಾಹಿನಿಯನ್ನು ನೋಡಕೊಡದಿರುವುದು ಇವು ಯೋಗ್ಯ ಶಿಕ್ಷೆಗಳಾಗಿವೆ.
ಎಳೆಯ ಮನಸ್ಸಿನ ಮೇಲೆ ಸಂಸ್ಕಾರವನ್ನು ಮಾಡಿರಿ !
"ಸಾಧನೆಯ ಮೂಲ ತಳಹದಿಯೆಂದರೆ ಶಿಸ್ತು. ಪ್ರತಿಯೊಂದು ಕೃತಿಗೂ ಒಂದು ವೇಳೆ ಶಿಸ್ತು, ನಿಯಮಗಳನ್ನು ಹಾಕಿಕೊಳ್ಳದಿದ್ದರೆ, ಆ ಕೃತಿಗಳು ಅಪೂರ್ಣವಾಗುತ್ತವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಶಿಸ್ತಿನ ಕಟ್ಟುನಿಟ್ಟಿನ ಪಾಲನೆಯನ್ನು ಮಾಡಿದರೆ ಅಧ್ಯಾತ್ಮದಲ್ಲಿನ ಪ್ರಗತಿಯು ಶೀಘ್ರವಾಗಿ ಆಗುತ್ತದೆ. ಅದಕ್ಕಾಗಿ ಚಿಕ್ಕಂದಿನಿಂದಲೇ ಶಿಸ್ತಿನ ಸಂಸ್ಕಾರವನ್ನು ಎಳೆಯ ಮನಸ್ಸಿನ ಮೇಲೆ ಬಿಂಬಿಸಬೇಕು."
ಮಕ್ಕಳ ಮೇಲೆ ಸುಸಂಸ್ಕಾರವಾಗುವುದಕ್ಕಾಗಿ ಸಾಧನೆಯ ಬೆಂಬಲವನ್ನು ನೀಡುವುದು
ಮಕ್ಕಳು ಸದ್ಗುಣಿಗಳಾಗಲು ಎರಡು ವಿಷಯಗಳು ಆವಶ್ಯಕವಿರುತ್ತವೆ. ಮೊದಲನೆಯದೆಂದರೆ ಪಾಲಕರು ಸ್ವತಃ ಸದ್ಗುಣಿಗಳಾಗಿರಬೇಕು ಮತ್ತು ಎರಡನೆಯದೆಂದರೆ ಅವರಿಗೆ ಶಿಸ್ತನ್ನು ಕಲಿಸುವುದರೊಂದಿಗೆ ಅವರಿಗೆ ಭಕ್ತಿಯನ್ನು ಮಾಡಲು ಕಲಿಸಬೇಕು. ಸಾಧನೆಯ ಅಥವಾ ಉಪಾಸನೆಯ ಬೆಂಬಲವಿದ್ದರೆ ಮಕ್ಕಳಲ್ಲಿ ಸದ್ಗುಣಗಳು ತಕ್ಷಣ ಮೈಗೂಡುತ್ತವೆ. ಹಠಮಾರಿ ಅಥವಾ ಕೇಳದಿರುವ ಮಕ್ಕಳನ್ನು ಬದಲಾಯಿಸುವ ಶಕ್ತಿಯು ಭಗವಂತನ ನಾಮದಲ್ಲಿದೆ ಹಾಗೂ ಇದರ ಅನುಭವವನ್ನು ಎಷ್ಟೋ ಜನರು ತೆಗೆದುಕೊಂಡಿದ್ದಾರೆ."
ಭಕ್ತಿಯ ಬೀಜವನ್ನು ಸ್ವಂತದ ಹೃದಯಕಮಲದ ಮೇಲೆ ಬಿತ್ತುವುದರಿಂದ ಆ ಬೀಜವು ಮಕ್ಕಳಲ್ಲಿ ನಿರ್ಮಾಣವಾಗುವುದು
ಈ ಎಲ್ಲ ಸ್ಥಿತಿಯನ್ನು ಬದಲಾಯಿಸಲು ನಮಗೆ ಜೀವನದಲ್ಲಿ ಅಧ್ಯಾತ್ಮದ, ಭಕ್ತಿಯ ಅವಶ್ಯಕತೆಯಿರುತ್ತದೆ. ಮೊದಲು ಪಾಲಕರು ಭಕ್ತಿಯ ಬೀಜವನ್ನು ಸ್ವಂತದ ಹೃದಯಕಮಲದಲ್ಲಿ ಬಿತ್ತಬೇಕು. ಅಂದಾಗಲೇ ಆ ಬೀಜವು ಅವರ ಮಕ್ಕಳಲ್ಲಿ ನಿರ್ಮಾಣವಾಗುವುದು. "ವಾಲ್ಯಾ ಇದ್ದವನು ವಾಲ್ಮೀಕಿಯಾದನು", ಎಂಬ ಕತೆಗಳನ್ನು ನಾವು ಹೇಳುತ್ತೇವೆ, ಆದರೆ ಸ್ವತಃ ಮಾತ್ರ ಸಾಧನೆಯನ್ನು ಮಾಡುವುದಿಲ್ಲ. "ಭಗವಂತನ ನಾಮದಲ್ಲಿಯೇ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಕ್ಷಮತೆಯಿರುವ ಅರಿವು ಎಲ್ಲ ಪಾಲಕರಿಗೆ ಆಗಲಿ ಮತು ಎಲ್ಲ ಪಾಲಕರ ಮಾಧ್ಯಮದಿಂದ ಸುಸಂಸ್ಕಾರಿತ ಸದ್ಗುಣಿ ಪೀಳಿಗೆಯು ರಾಷ್ಟ್ರಕ್ಕೆ ದೊರಕಿ ಈಶ್ವರೀ ರಾಜ್ಯವು ಶೀಘ್ರವಾಗಿ ಬರಲಿ", ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.

No comments:

Post a Comment